Advertisement

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

12:29 AM Aug 14, 2022 | Team Udayavani |

ಮೂಡುಬಿದಿರೆ: ಆಂಧ್ರಪ್ರದೇಶದಿಂದ ಈಚರ್‌ ಲಾರಿಯಲ್ಲಿ ಮಂಗಳೂರು ಬಂದರಿಗೆ ಅಕ್ರಮವಾಗಿ 8 ಕೋಟಿ ರೂ. ಮೌಲ್ಯದ ರಕ್ತ ಚಂದನದ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ ಮೂಲ್ಕಿ ಕೆಂಚನಕೆರೆಯಲ್ಲಿ ಮಂಗಳೂರು ಅರಣ್ಯ ಸಂಚಾರ ದಳ ದವರಿಂದ ಸೆರೆಹಿಡಿಯಲ್ಪಟ್ಟು ಜೈಲು ಪಾಲಾಗಿದ್ದ ಪ್ರಕರಣದ 6 ಮಂದಿ ಆರೋಪಿಗಳಿಗೆ ಮೂಡುಬಿದಿರೆ ನ್ಯಾಯಾಲಯ ಜಾಮೀನು ನೀಡಿದೆ.

Advertisement

ಮಂಗಳೂರು ಅರಣ್ಯ ಸಂಚಾರ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್‌ ಮಾರ್ಗದರ್ಶನದಲ್ಲಿ ಅಧಿ ಕಾರಿಗಳ ತಂಡ ಕಳೆದ ಜೂನ್‌ನಲ್ಲಿ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ನೆಲ್ಲೂರಿನ ರಾಜೇಶ್‌ ರೆಡ್ಡಿ, ಕೇರಳ ಆನೆಕ್ಕಲ್‌ನ ಸುಭಾಷ್‌, ಶಾಮೀರ್‌ ಮತ್ತು ಮಹಮ್ಮದ್‌ ಕುಂಞಿ, ತಮಿಳುನಾಡು ತಿರುವೆಳ್ಳೂರಿನ ಪಾಲರಾಜ್‌, ದಿನೇಶ್‌ ಕುಮಾರ್‌ ಹಾಗೂ ಕೊಯಮತ್ತೂರಿನ ಅನಿಲ್‌ ಕುಮಾರ್‌ ಅವರನ್ನು ಬಂಧಿಸಿತ್ತು.

8 ಕೋಟಿ ರೂ. ಮೌಲ್ಯದ ರಕ್ತಚಂದನ ದಿಮ್ಮಿಗಳನ್ನು ಹಾಗೂ 2 ವಾಹನಗಳನ್ನು ವಶಪಡಿಸಿಕೊಂಡಿತ್ತು. ಆರೋಪಿಗಳು ರಕ್ತಚಂದನವನ್ನು ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುವ ಉದ್ದೇಶ ಹೊಂದಿರುವುದು ತನಿಖೆಯಿಂದ ಗೊತ್ತಾಗಿತ್ತು. ಈ ಪ್ರಕರಣ ಕರ್ನಾಟಕ, ತಮಿಳುನಾಡು ಹಾಗೂ ಆಂದ್ರಪ್ರದೇಶ ರಾಜ್ಯಗಳಿಗೆ ವಿಸ್ತರಿಸಿತ್ತು. ಹೀಗಾಗಿ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿ ಪೂರಕ ದಾಖಲೆಗಳನ್ನು ಸಂಗ್ರಹಿಸಿ 3 ತಿಂಗಳೊಳಗೆ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಲು ಸಾಧ್ಯವಾಗದಿದ್ದುದರಿಂದ ಮೂಡುಬಿದಿರೆ ಕೋರ್ಟ್‌ ಎಲ್ಲ ಆರು ಮಂದಿ ಆರೋಪಿಗಳಿಗೆ ಜಾಮೀನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next