Advertisement

ಉಪ್ಪುಂದ: ಚೂರಿ ಇರಿದು ಕೊಲೆ ಯತ್ನ; ಗಂಭೀರ

12:45 AM Jul 30, 2022 | Team Udayavani |

ಉಪ್ಪುಂದ: ಹೊಟೇಲ್‌ನಲ್ಲಿ ಊಟ ಮಾಡಿ ಹೊರಗಡೆ ಬಂದು ಮಾತನಾಡುತ್ತಿರುವಾಗ ಮಾತಿಗೆ ಮಾತು ಬೆಳೆದು ಯುವಕನ ಕುತ್ತಿಗೆಗೆ ಚೂರಿ ಇರಿದು ಕೊಲ್ಲಲು ಪ್ರಯತ್ನಸಿದ ಘಟನೆ ಉಪ್ಪುಂದದಲ್ಲಿ ಜು. 27ರಂದು ನಡೆದಿದೆ.

Advertisement

ಪ್ರಸನ್ನ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡ ಯುವಕ. ಉಪ್ಪುಂದ ಗ್ರಾಮ ಕರ್ಕಿಕಳಿ ಕನಕನ ನಿವಾಸಿ ಮನೋಜ ಖಾರ್ವಿ ಜು. 27ರಂದು ಮನೆಯಲ್ಲಿರುವಾಗ ಸ್ನೇಹಿತ ಪ್ರಸನ್ನ ದೇವಾಡಿಗ ಮನೆಗೆ ಬಂದಿದ್ದು, ಊಟದ ಸಲುವಾಗಿ ರಾತ್ರಿ 8 ಗಂಟೆಗೆ ನಂದನವನ ಗ್ರಾಮದ ಪರಿಚಯ ಹೊಟೇಲ್‌ನಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಹೋಗಿದ್ದರು. ರಾತ್ರಿ ಊಟ ಮಾಡಿ ಹಣ ಕೊಡಲು ಕ್ಯಾಶ್‌ ಕೌಂಟರ್‌ ಬಳಿ ಬಂದಾಗ ಪ್ರಸನ್ನನು ಹೊರಗಡೆ ಬಂದು ಮನೋಜನ ಸೇ°ಹಿತರಾದ ಯತೀಶ ಮತ್ತು ಸುದರ್ಶನ್‌ ಅವರೊಂದಿಗೆ ಮಾತನಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ಸುದರ್ಶನ, ಪ್ರಸನ್ನನಿಗೆ ಅವಾಚ್ಯವಾಗಿ ಬೈದು ನಿನ್ನನ್ನು ಕೊಂದೇ ಬಿಡುವುದಾಗಿ ಹೇಳಿ ಕಿಸೆಯಿಂದ ಚಾಕು ತೆಗೆದು ಕುತ್ತಿಗೆಯತ್ತ ಬೀಸಿದ್ದು, ಪ್ರಸನ್ನ ತೀವ್ರ ಗಾಯಗೊಂಡು ಬೊಬ್ಬೆ ಹಾಕಿದ್ದ. ಈ ವೇಳೆ ಸುದರ್ಶನ ತಾನು ತಂದಿದ್ದ ಬೈಕ್‌ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ಗಾಯಗೊಂಡ ಪ್ರಸನ್ನ ಅವರನ್ನು ಚಿಕಿತ್ಸೆಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಕುಂದಾಪುರ ಸರಕಾರಿ ಆಸ್ಪತ್ರೆ, ಅನಂತರ ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿದೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರಿನ ತಗ್ಗರ್ಸೆ ದೇಗುಲದಲ್ಲಿ ಕಳವು
ಬೈಂದೂರು: ತಗ್ಗರ್ಸೆ ಗ್ರಾಮದ ಚಂದಣದ ಸೋಮ ಲಿಂಗೇಶ್ವರ ದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ಕಳ್ಳರು ಗುರುವಾರ ಮುಂಜಾನೆ 36 ಸಾವಿರಕ್ಕೂ ಮಿಕ್ಕಿ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ದೋಚಿರುವ ಘಟನೆ ನೆಡೆದಿದೆ.

ದೇಗುಲದ ಬೀಗ ಹಾಕುವ ಕೊಂಡಿಯನ್ನು ಕಬ್ಬಿಣದ ರಾಡಿನಿಂದ ಮುರಿದ ಕಳ್ಳರು ಗರ್ಭಗುಡಿಯೊಳಗೆ ನುಗ್ಗಿ ಕೃತ್ಯವೆಸಗಿದ್ದಾರೆ. ಬೈಂದೂರು ಎಸ್ಸೆ„ ಪವನ್‌ ನಾಯಕ್‌ ಅವರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next