Advertisement

Crime: ಓವರ್‌ ಡೋಸ್‌ ಸಿರಪ್‌ ಕುಡಿಸಿ ಮಗುವಿನ ಹತ್ಯೆಗೆ ಸಂಚು?

01:30 AM Jan 11, 2024 | Team Udayavani |

ಪಣಜಿ: ಹೆತ್ತ ಮಗುವನ್ನೇ ಕೊಂದಿರುವ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ನವೋದ್ಯಮ ಸಂಸ್ಥೆಯ ಸಿಇಒ ಸುಚನಾ ಸೇಠ್‌ ಮಗುವನ್ನು ಕೊಲ್ಲುವ ಮುನ್ನವೇ ತೀವ್ರ ಪ್ರಮಾಣದ ಕೆಮ್ಮಿನ ಸಿರಪ್‌ ಕುಡಿಸಿರುವ ಸಾಧ್ಯತೆಗಳಿದ್ದು,ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಗೋವಾದಲ್ಲಿ ಮಗುವನ್ನು ಮಹಿಳೆ ಹತ್ಯೆ ಮಾಡಿದ್ದಾಳೆ ಎನ್ನಲಾಗಿರುವ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ಕೆಮ್ಮಿನ ಸಿರಪ್‌ನ 2 ಖಾಲಿ ಬಾಟಲಿಗಳು ಪತ್ತೆಯಾಗಿವೆ. ಆ ಪೈಕಿ ಒಂದನ್ನು ಆಕೆ ಅಪಾರ್ಟ್‌ಮೆಂಟ್‌ಗೆ ತೆರಳುವಾಗಲೇ ಕೊಂಡೊಯ್ದಿದ್ದರು. ಮತ್ತೂಂದು ಬಾಟಲಿಯನ್ನು ಸಿಬಂದಿ ಬಳಿ ಕೇಳಿ ತರಿಸಿಕೊಂಡಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೈ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಈ ಹಿನ್ನೆಲೆಯಲ್ಲಿ ಮಗುವನ್ನು ಮೊದಲೇ ಪ್ರಜ್ಞೆ ತಪ್ಪಿಸಲು ಓವರ್‌ ಡೋಸ್‌ ಸಿರಪ್‌ ನೀಡಿ ರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿರಪ್‌ ಬಾಟಲಿಯನ್ನು ಮೊದಲೇ ಕೊಂಡೊ ಯ್ದಿರುವ ಹಿನ್ನೆಲೆಯಲ್ಲಿ ಮಗುವಿನ

ಹತ್ಯೆಗೆ ಮೊದಲೇ ಸಂಚು ರೂಪಿಸಲಾಗಿತ್ತೇ ಎಂಬ ಶಂಕೆಯೂ ಮೂಡಿದ್ದು, ಕೃತ್ಯದ ಹಿಂದಿನ ಆಕೆಯ ಉದ್ದೇಶ ಮತ್ತು ಮನಃಸ್ಥಿತಿಯನ್ನು ಅರಿಯಲು ಸುಚನಾಳನ್ನು ಮಾನಸಿಕ ಪರೀಕ್ಷೆಗೂ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next