Advertisement

ಕೇರಳ ಚರ್ಚ್‌ ಪಾದ್ರಿಗಳಿಂದ ಅತ್ಯಾಚಾರ: ಕ್ರೈಮ್‌ ಬ್ರಾಂಚ್‌ ತನಿಖೆ

04:22 PM Jun 29, 2018 | udayavani editorial |

ತಿರುವನಂತಪುರ : ಮಹಿಳೆಯೊಬ್ಬರಿಗೆ ಕೇರಳದಲ್ಲಿನ  ಐವರು ಪಾದ್ರಿಗಳು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಕೆಲವು ದಿನಗಳ ತರುವಾಯ ಕೇರಳ ರಾಜ್ಯ ಪೊಲೀಸ್‌ ಮುಖ್ಯಸ್ಥ ಲೋಕನಾಥ್‌ ಬೆಹರಾ ಅವರು ಈ ಬಗ್ಗೆ ಕ್ರೈಮ್‌ ಬ್ರಾಂಚ್‌ ಪೊಲೀಸರಿಂದ ತನಿಖೆಗೆ ಆದೇಶಿಸಿದ್ದಾರೆ.

Advertisement

ಕೇರಳದ ಮಲಂಕರಾ ಆರ್ಥಡಕ್ಸ್‌ ಸಿರಿಯನ್‌ ಚರ್ಚ್‌ನ ಐವರು ಪಾದ್ರಿಗಳು  ಮಹಿಳೆಯರನ್ನು ಬ್ಲಾಕ್‌ ಮೇಲ್‌ ಮಾಡಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಎಂಬ ಆರೋಪಗಳಿವೆ. 

ತನ್ನ ಪತ್ನಿಗೆ ಈ ಐವರು ಪಾದ್ರಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆಕೆಯ ಪತಿ ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಕೋರಿ ಹಿರಿಯ ಸಿಪಿಎಂ ನಾಯಕ ಮತ್ತು ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ  ವಿ ಎಸ್‌ ಅಚ್ಯುತಾನಂದನ್‌ ಅವರು ಬೆಹರಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next