Advertisement

ಕ್ರಿಕೆಟ್‌: ಯೂನಿಸಿಸ್‌ ಬೆಂಗಳೂರು ತಂಡಕ್ಕೆ ಪ್ರಶಸ್ತಿ

07:49 AM Mar 31, 2017 | |

ಮಣಿಪಾಲ: ಮಣಿಪಾಲ ವಿವಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ 5ನೇ ಕಾರ್ಪೊರೇಟ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಕೂಟದ ಪ್ರಶಸ್ತಿಯನ್ನು ಬೆಂಗಳೂರಿನ ಯೂನಿಸಿಸ್‌ ಕಂಪೆನಿ ಗೆದ್ದುಕೊಂಡಿದೆ. 

Advertisement

ಫೈನಲ್‌ನಲ್ಲಿ ಇನ್ಫೋಸಿಸ್‌ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಯೂನಿಸಿಸ್‌ ತಂಡವು ಟ್ರೋಫಿ ಮತ್ತು ಒಂದು ಲಕ್ಷ ರೂ. ನಗದನ್ನು ತನ್ನದಾಗಿಸಿಕೊಂಡರೆ ರನ್ನರ್‌ ಅಪ್‌ ಇನ್ಫೋಸಿಸ್‌ 50 ಸಾವಿರ ರೂ. ನಗದು ಪಡೆಯಿತು. ಟೈಟಾನ್‌, ಎಚ್‌ಪಿ, ಯೂನಿಸಿಸ್‌, ಇನ್ಫೋಸಿಸ್‌, ಮಣಿಪಾಲ ವಿವಿ, ಎಂಸಿಎಫ್ ಮಂಗಳೂರು, ಡಿಎನ್‌ಐ, ಚಿಕ್ಕಮಗಳೂರು ಪೊಲೀಸ್‌ ಸಹಿತ ಹಲವು ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್‌ನಲ್ಲಿ ಇನ್ಫೋಸಿಸ್‌ ತಂಡವು ಚಿಕ್ಕಮಗಳೂರು ಪೊಲೀಸ್‌ ತಂಡವನ್ನು 37 ರನ್‌ ಮತ್ತು ಯೂನಿಸಿಸ್‌ ತಂಡವು ಟೈಟಾನ್‌ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿ ಫೈನಲಿಗೇರಿದ್ದವು. ಅಮೋಘ ಬ್ಯಾಟಿಂಗ್‌ ಮತ್ತು 11 ವಿಕೆಟ್‌ ಕಿತ್ತ ಯೂನಿಸಿಸ್‌ನ ಶಮೀಕ್‌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತ ಅಂಧರ ಕ್ರಿಕೆಟ್‌ ತಂಡದ ಉಪನಾಯಕ ಪ್ರಕಾಶ್‌ ಜಯ ರಾಮಯ್ಯ ಈ ಪಂದ್ಯಾಟವನ್ನು ಉದ್ಘಾಟಿಸಿದ್ದರು. ಜಿಲ್ಲಾ ಕ್ರಿಕೆಟ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ಪ್ರೊ| ಬಾಲಕೃಷ್ಣ ಮಧ್ದೋಡಿ, ಕ್ರೀಡಾ ನಿರ್ದೇಶಕ ಉಪೇಂದ್ರ ನಾಯಕ್‌ ಪ್ರಶಸ್ತಿ ವಿತರಿಸಿದರು. ಸಂಘಟಕ ರೆನ್‌ ಟ್ರೆವರ್‌ ಡಯಾಸ್‌ ಉಪಸ್ಥಿತರಿದ್ದರು. ನಿರಂಜನ ಪ್ರಭು ಸ್ವಾಗತಿಸಿದರು. ನಿಖೀತಾ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next