Advertisement

ಕ್ರಿಕೆಟ್‌: ಭದ್ರತೆ ಕೋರಿ ಡಿಸಿಎಂಗೆ ಮನವಿ 

06:20 AM Sep 02, 2018 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗ ಸೆ. 8 ಮತ್ತು 9ರಂದು ಆಯೋಜಿಸಿರುವ ಕರ್ನಾಟಕ ಚಲನಚಿತ್ರ ಕ್ರಿಕೆಟ್‌ ಕಪ್‌
ಪಂದ್ಯಾವಳಿಗೆ ಪೊಲೀಸ್‌ ಭದ್ರತೆ ಸೇರಿ ಸ್ಥಳೀಯ ಆಡಳಿತದಿಂದ ಸಹಕಾರ ಕೋರಿ ಚಿತ್ರನಟ ಸುದೀಪ್‌ ಶನಿವಾರ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿದರು.

Advertisement

ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ಸುದೀಪ್‌, ಪಂದ್ಯ ವೀಕ್ಷಿಸಲು ಆಗಮಿಸುವಂತೆಯೂ ಮನವಿ
ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್‌, ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.

ಕೊಡಗು ಸಂತ್ರಸ್ತರಿಗೆ ಪರಿಹಾರ: ಕೊಡಗಿನಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಚಲನಚಿತ್ರ ರಂಗದಿಂದ
ನೆರವು ನೀಡಲು ನಿರ್ಧರಿಸಲಾಗಿದ್ದು, ಕ್ರಿಕೆಟ್‌ ಕಪ್‌ ಪಂದ್ಯಾವಳಿ ವೇಳೆ ಚಿತ್ರತಂಡದಿಂದ ಮುಖ್ಯಮಂತ್ರಿಗಳ
ಪರಿಹಾರ ನಿಧಿಗೆ ಈ ಮೊತ್ತವನ್ನು ಅರ್ಪಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next