Advertisement

Cricket; ಇದ್ದಕ್ಕಿದ್ದಂತೆ ಅಸ್ವಸ್ಥರಾದ ಮಯಾಂಕ್ ಅಗರ್ವಾಲ್: ಐಸಿಯುನಲ್ಲಿ ಚಿಕಿತ್ಸೆ

06:38 PM Jan 30, 2024 | Team Udayavani |

ಅಗರ್ತಲಾ: ಕರ್ನಾಟಕ ರಣಜಿ ತಂಡದ ನಾಯಕ, ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಆರೋಗ್ಯ ಮಂಗಳವಾರ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು,ಸದ್ಯ ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಅಗರ್ತಲಾದಲ್ಲಿ ರಣಜಿ ಪಂದ್ಯವನ್ನು ಆಡಿದ ನಂತರ ಮಯಾಂಕ್ ವಿಮಾನದಲ್ಲಿ ಸೂರತ್‌ಗೆ ಪ್ರಯಾಣಿಸುತ್ತಿದ್ದರು. ಅವರು ವಿಮಾನವನ್ನು ಹತ್ತಿದ ತತ್ ಕ್ಷಣ, ಅವರು ತಮ್ಮ ಬಾಯಿ ಮತ್ತು ಗಂಟಲಿನಲ್ಲಿ ಅಸ್ವಸ್ಥತೆಯ ಬಗ್ಗೆ ಹೇಳಿಕೊಂಡಿದ್ದು, ನಂತರ ಅವರನ್ನು ಡಿಬೋರ್ಡ್ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮಯಾಂಕ್ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದು, ಯಾವುದೇ ಅಪಾಯದಲ್ಲಿಲ್ಲ. ರಣಜಿ ಟ್ರೋಫಿಯಲ್ಲಿ ಮಯಾಂಕ್ ಕರ್ನಾಟಕದ ನಾಯಕರಾಗಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ.

ಮಯಾಂಕ್ ಅವರು ತ್ರಿಪುರಾ ವಿರುದ್ಧ ರಣಜಿ ಟ್ರೋಫಿ ಪಂದ್ಯವನ್ನು ಆಡಲು ಅಗರ್ತಲಾದಲ್ಲಿದ್ದರು. ಅಗರ್ತಲಾದ ಮಹಾರಾಜ್ ಬಿರ್ ಬಿಕ್ರಮ್ ಸ್ಟೇಡಿಯಂನಲ್ಲಿ ಜನವರಿ 26 ರಿಂದ 29 ರ ವರೆಗೆ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತ್ರಿಪುರಾ ತಂಡವನ್ನು 29 ರನ್‌ಗಳಿಂದ ಸೋಲಿಸಿತ್ತು. ಕರ್ನಾಟಕದ ಮುಂದಿನ ಪಂದ್ಯ ರೈಲ್ವೇಸ್ ವಿರುದ್ಧವಾಗಿದ್ದು, ಫೆಬ್ರವರಿ 2 ರಿಂದ ಸೂರತ್‌ನ ಲಾಲ್‌ಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next