Advertisement

ಕ್ರಿಕೆಟ್‌ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; 18 ಮಂದಿ ಬಂಧನ

08:26 PM Sep 29, 2020 | mahesh |

ಮಂಗಳೂರು: ನಗರದ ಕಾರ್‌ಸ್ಟ್ರೀಟ್‌ ಸಮೀಪದ ಅಂಗಡಿಯೊಂದರಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ 18 ಮಂದಿಯನ್ನು ನಗರ ಸಿಸಿಬಿ ಮತ್ತು ಬಂದರು ಪೊಲೀಸರು ಬಂಧಿಸಿದ್ದಾರೆ.

Advertisement

ಶ್ರೀನಿವಾಸ್‌, ಜಗದೀಶ್‌, ಉನ್ನಿಕೃಷ್ಣನ್‌, ಸುಧಾಕರ್‌, ಪ್ರತಾಪ್‌ ಶೆಟ್ಟಿ, ಜಾನ್‌ ಕೊಯಲ್ಲೋ, ತಿಮ್ಮಪ್ಪ ಗೌಡ, ರಿಚರ್ಡ್‌ ಲೋಬೋ, ಮೊಹಿದ್ದೀನ್‌ ಕುನ್ನಿ, ಕೆ. ಸುಬ್ರಹ್ಮಣ್ಯ ಶೇಟ್‌, ಗೌತಮ್‌ ಬಂಧಿತರು. ಆರೋಪಿಗಳಿಂದ 11 ಮೊಬೈಲ್‌ ಹಾಗೂ 15,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗ ಡಿಸಿಪಿ ಅರುಣಾಂಶುಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್‌ ಗಾಂವ್ಕರ್‌ ಅವರ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಬಂದರು ಠಾಣಾ ಇನ್‌ಸ್ಪೆಕ್ಟರ್‌ ಗೋವಿಂದರಾಜು, ಎಸ್‌ಐ ಗುರುಕಾಂತಿ ಮತ್ತು ಸಿಬಂದಿ, ಸಿಸಿಬಿ ಸಬ್‌ಇನ್‌ಸ್ಪೆಕ್ಟರ್‌ ಕಬ್ಬಳ್‌ರಾಜ್‌ ಮತ್ತು ಸಿಬಂದಿ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next