Advertisement

ಬಳ್ಳಾರಿ: ರೈತರಿಂದ ಪಡೆದ ಜಮೀನುಗಳಿಗೆ ಸಿಗದ ಪರಿಹಾರ… ಸರಕಾರದ ವಿರುದ್ಧ CPIM ಪ್ರತಿಭಟನೆ

11:43 AM Aug 06, 2024 | Team Udayavani |

ಬಳ್ಳಾರಿ: ಕೈಗಾರಿಕೆ ಸ್ಥಾಪಿಸುವುದಾಗಿ ತಾಲೂಕಿನ ಕುಡತಿನಿ ಬಳಿಯ ರೈತರಿಂದ ಪಡೆದಿರುವ ಜಮೀನುಗಳಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸಿಪಿಐಎಂ ಸಂಘಟನೆಯಿಂದ ಮಂಗಳವಾರ ಕುಡತಿನಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕುಡತಿನಿ ಬಳಿಯ ಸಾವಿರಾರು ಎಕರೆ ಜಮೀನುಗಳಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ದಶಕದ ಹಿಂದೆ ಕೆಐಎಡಿಬಿ ಮೂಲಕ ಅತ್ಯಂತ ಕಡಿಮೆ ಬೆಲೆ ವಶಕ್ಕೆ ಪಡೆಯಲಾಗಿತ್ತು.

ಈ ಬೆಲೆಯನ್ನು ಅಂದು ಜಿಲ್ಲಾ ನ್ಯಾಯಾಲಯ ಅವೈಜ್ಞಾನಿಕ ಎಂದು ಹೇಳಿದೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೂ ಇದೆ. ಈಚೆಗೆ ಸುಪ್ರೀಂ ಕೋರ್ಟ್ ಪ್ರತಿ ಎಕರೆಗೆ ಇಂತಿಷ್ಟು ಪರಿಹಾರ ನೀಡುವಂತೆಯೂ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಕುಡತಿನಿ ಬಂದ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ‌.

ಬಂದ್ ಹಿನ್ನೆಲೆಯಲ್ಲಿ ಕುಡತಿನಿ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಪಟ್ಟಣದ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಸಿಪಿಐಎಂ ಮುಖಂಡರಾದ ಯು.ಬಸವರಾಜ್, ಸತ್ಯಬಾಬು ಸೇರಿ ಹಲವು ಮುಖಂಡರು ಇದ್ದರು.

Advertisement

ಇದನ್ನೂ ಓದಿ: Shocking: ಮದ್ಯದ ಅಮಲಿನಲ್ಲಿ ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೆ ಯತ್ನಿಸಿದ ಮಗ

Advertisement

Udayavani is now on Telegram. Click here to join our channel and stay updated with the latest news.

Next