Advertisement

ಜಾನುವಾರುಗಳಿಗೆ ವಿಮೆ ಮಾಡಿಸಿ

03:05 PM Jul 25, 2022 | Team Udayavani |

ಕಾಳಗಿ: ರೈತರು ತಮ್ಮಲಿರುವ ಹಸು, ಎಮ್ಮೆಗಳಿಗೆ ವಿಮೆ ಮಾಡಿಸುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ತಾಲೂಕು ಪಶು ಆಸ್ಪತ್ರೆ ಹಿರಿಯ ಪಶುವೈದ್ಯಾಧಿಕಾರಿ ಡಾ| ಅಣ್ಣರಾವ್‌ ಪಾಟೀಲ ಹೇಳಿದರು.

Advertisement

ತಾಲೂಕಿನ ಗೋಟೂರ ತಾಂಡಾದಲ್ಲಿ ಹಸು ಮತ್ತು ಎಮ್ಮೆಗಳ ವಿಮೆ ಮಾಡಿಸುವಂತೆ ರೈತರಿಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಪಶುಪಾಲನೆ ಇಲಾಖೆ ಎನ್‌.ಎಲ್‌. ಎಂ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಬಿಪಿಎಲ್‌ ರೈತರಿಗೆ ವಿಮೆ ಕಂತಿನ ಶೇ. 70 ಹಾಗೂ ಸಾಮಾನ್ಯ ರೈತರಿಗೆ ಶೇ.50ರಷ್ಟು ಮೊತ್ತವನ್ನು ಸರ್ಕಾರವೇ ಭರಿಸುತ್ತದೆ. ಆದ್ದರಿಂದ ರೈತರು ತಡ ಮಾಡದೇ ತಮ್ಮ ಹಸು ಹಾಗೂ ಎಮ್ಮೆಗಳ ವಿಮೆ ಮಾಡಿಸಿಕೊಳ್ಳಬೇಕು ಎಂದರು.

ವಿಮೆ ಅವಧಿಯು ಒಂದರಿಂದ ಮೂರು ವರ್ಷ ವರೆಗೆ ಇರುತ್ತದೆ. ಈಗಾಗಲೇ ಹಲವಾರು ಜಾನುವಾರುಗಳನ್ನು ವಿಮೆಗೆ ಒಳಪಡಿಸಿದ್ದು, ಹಂತ ಹಂತವಾಗಿ ಉಳಿದ ಜಾನುವಾರುಗಳಿಗೂ ವಿಮೆ ಮಾಡಲಾಗುವುದು ಎಂದು ಹೇಳಿದರು.

ತಾಲೂಕಿನ 14 ಪಶು ಆಸ್ಪತ್ರೆಯಲ್ಲಿ ಹಸು, ಎಮ್ಮೆಗಳ ವಿಮೆ ಮಾಡಲಾಗುತ್ತಿದ್ದು ಜುಲೈ 31ಕ್ಕೆ ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಪಶು ಆಸ್ಪತ್ರೆಗೆ ಸಂಪರ್ಕಿಸುವಂತೆ ಪಶುವೈದ್ಯ ಅಣ್ಣರಾವ್‌ ಪಾಟೀಲ ತಿಳಿಸಿದ್ದಾರೆ. ಈ ಸಮಯದಲ್ಲಿ ತಾಂಡಾದ ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡಿ, ಮಳೆಗಾಲದಲ್ಲಿ ಜಾನುವಾರು ಸಂರಕ್ಷಣೆ ಬಗ್ಗೆ ರೈತರಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next