Advertisement

ಕೊರೊನಾ 3ನೇ ಅಲೆ ಎದುರಿಸಲು ಸಜ್ಜಾಗಿ

08:08 PM Jul 08, 2021 | Team Udayavani |

ಕೋಲಾರ:ಕೊರೊನಾ ಮೂರನೇ ಅಲೆಗೆಯಾವುದೇತೊಂದರೆಗಳು ಆಗದಂತೆ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ತಯಾರಿನಡೆಸಿಕೊಳ್ಳುಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿಜಿಲ್ಲಾ ಪಂಚಾಯತಿಯ ಪ್ರಗತಿ ಪರಿಶೀಲನಾ ಸಭೆಹಾಗೂ ಕೋವಿಡ್‌ ಮೂರನೇ ಅಲೆಯಪೂರ್ವತಯಾರಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ಕೋವಿಡ್‌ಗೆ ಸಂಬಂಧಿಸಿದನೋಡಲ್‌ ಅಧಿಕಾರಿಗಳು, ಪೊಲೀಸ್‌ ಇಲಾಖೆಯಜಂಟಿಯಾಗಿ ಗ್ರಾಮಮಟ್ಟದಲ್ಲಿ ಕೊರೊನಾರೋಗಿಗಳನ್ನು ತಪಾಸಣೆ ನಡೆಸಬೇಕು.

ಹೊರರಾಜ್ಯಗಳಿಂದ ಜಿಲ್ಲೆಗೆ ಮಾರುಕಟ್ಟೆಗಳಿಗೆ ವ್ಯಾಪಾರಕ್ಕೆಬರುವರನ್ನು ಗಡಿಭಾಗದಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಲಸಿಕೆ ಪಡೆದವರಿಗೆ ಹಾಗೂ ನೆಗೆಟಿವ್‌ಬಂದವರಿಗೆ ಮಾತ್ರ ಅವಕಾಶ ನೀಡಬೇಕು. ಇದಕ್ಕೆಸಂಬಂಧಿಸಿದಂತೆ ಗಡಿಯಲ್ಲಿ ಸೂಕ್ತವಾದ ಕಟ್ಟೆ ಎಚ್ಚರವಹಿಸಬೇಕು ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next