Advertisement

4867 ಮಂದಿಗೆ ಸೋಂಕು, 142 ಸಾವು

07:04 PM Jun 22, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕುಹೊಸ ಪ್ರಕರಣಗಳು ಮತ್ತು ಸೋಂಕಿತರ ಸಾವು ತುಸುಹೆಚ್ಚಳವಾಗಿದೆ. ಸೋಮವಾರ 4867 ಮಂದಿಗೆಸೋಂಕು ತಗುಲಿದ್ದು, 142 ಸೋಂಕಿತರ ಸಾವಾಗಿದೆ. 8,404 ಸೋಂಕಿತರು ಗುಣಮುಖರಾಗಿದ್ದಾರೆ.ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು25 ಸಾವಿರ (1.49 ಲಕ್ಷಕ್ಕೆ) ಕಡಿಮೆಯಾಗಿವೆ.

Advertisement

ಹೊಸಪ್ರಕರಣಗಳು 350, ಸೋಂಕಿತರ ಸಾವು 22ಏರಿಕೆಯಾಗಿದೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿದರ ಶೇ.3.3, ಮರಣದರ ಶೇ.2.9ರಷ್ಟಿದೆ.ಬೆಂಗಳೂರು ಮತ್ತೆ ಒಂದು ಸಾವಿರ ಗಡಿದಾಟಿದೆ.1034 ಮಂದಿಗೆ ಸೋಂಕು ತಗುಲಿದ್ದು, 28ಸೋಂಕಿತರ ಸಾವಾಗಿದೆ. ಉಳಿದಂತೆ ಎಲ್ಲಾಜಿಲ್ಲೆಗಳಲ್ಲಿಯೂ ಸಾವಿರಕ್ಕಿಂತ ಕಡಿಮೆ ಪ್ರಕರಣಗಳುವರದಿಯಾಗಿವೆ.

ಉಳಿದಂತೆ ಅತಿ ಹೆಚ್ಚು ದಕ್ಷಿಣ ಕನ್ನಡದಲ್ಲಿ 542, ಮೈಸೂರು 546, ಹಾಸನ 346,ಬೆಳಗಾವಿ 364, ಕೊಡಗು 206, ಶಿವಮೊಗ್ಗ 217ಮಂದಿಗೆ ಸೋಂಕು ತಗುಲಿದೆ. 13 ಜಿಲ್ಲೆಗಳಲ್ಲಿ100ಕ್ಕಿಂತಕಡಿಮೆಹೊಸಪ್ರಕರಣಗಳುಪತ್ತೆಯಾಗಿವೆ.ಅತಿ ಹೆಚ್ಚು ಮೈಸೂರು 22, ಬಳ್ಳಾರಿ 12, ದಕ್ಷಿಣಕನ್ನಡ 14, ಉಳಿದ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟುಸೋಂಕಿತರ ಸಾವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next