Advertisement
ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಸಭಾಂಗಣದಲ್ಲಿ ಕೋವಿಡ್ -19 ಪರಿಸ್ಥಿತಿ ಮತ್ತು ಕ್ರಮಗಳ ಪರಿಶೀಲನೆ ಸಭೆಯಲ್ಲಿ ಅವರು ಬಾರಾಮತಿ ನಗರ ಸಹಿತ ತಾಲೂಕಿನಲ್ಲಿ ಪ್ರಸ್ತುತ ಕೊರೊನಾ ವೈರಸ್ ಸ್ಥಿತಿ, ಕಪ್ಪು ಶಿಲೀಂಧ್ರ ಪ್ರಸ್ತುತ ಸ್ಥಿತಿ, ಆಡಳಿತವು ಕೈಗೊಳ್ಳಬೇಕಾದ ಕ್ರಮಗಳು, ಮಕ್ಕಳಿಗೆ ವೈದ್ಯಕೀಯ ಸೌಲಭ್ಯಗಳು ಮತ್ತು ಲಸಿಕೆ, ಆಮ್ಲಜನಕದ ಲಭ್ಯತೆ, ಆರೋಗ್ಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
Related Articles
Advertisement
ಜನಸಂದಣಿ ನಿಯಂತ್ರಿಸಲು ಪೊಲೀಸ್ ಆಡಳಿತವು ಕ್ರಮ ತೆಗೆದುಕೊಳ್ಳುವ ಆವಶ್ಯಕತೆ ಯಿದೆ. ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆ ಗಳನ್ನು ಒದಗಿಸುವುದನ್ನು ಖಾತ್ರಿಪಡಿಸಿಕೊಳ್ಳ ಬೇಕು. ಮೂರನೇ ಅಲೆಯ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಅವಶ್ಯಕತೆಯಿದೆ. ವ್ಯಾಕ್ಸಿನೇಶನ್ಗಳ ಸರಿಯಾದ ಯೋಜನೆ, ಕಪ್ಪು ಶಿಲೀಂಧ್ರದಿಂದ ಪೀಡಿತ ರೋಗಿಗೊಳ ಚಿಕಿತ್ಸೆಗೆ ಚುಚ್ಚುಮದ್ದಿನ ಸರಿಯಾದ ಯೋಜನೆ ಅತ್ಯಗತ್ಯ ಎಂದವರು ತಿಳಿಸಿದರು.
ಆಡಳಿತ ಮಂಡಳಿ ಕೈಗೊಳ್ಳುತ್ತಿರುವ ಕ್ರಮ ಗಳ ಬಗ್ಗೆ ಉಪ ವಿಭಾಗೀಯ ಅಧಿಕಾರಿ ದಾದಾಸಾಹೇಬ್ ಕಾಂಬ್ಳೆ ಮಾಹಿತಿ ನೀಡಿದರು. ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಂಭವನೀಯ 3ನೇ ಅಲೆ ಯನ್ನು ಎದುರಿಸಲು ಸಿದ್ಧತೆಗಳು, ಆಮ್ಲಜನಕ ಮತ್ತು ಕಪ್ಪು ಶಿಲೀಂಧ್ರ ರೋಗಿಗಳ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬಾರಾಮತಿ ಮುನ್ಸಿಪಲ್ ಕೌನ್ಸಿಲ್ ಮೇಯರ್ ಪೂರ್ಣಿಮಾ ತಾವಾರೆ, ಪಂ. ಸಮಿತಿ ಅಧ್ಯಕ್ಷೆ ನೀತಾ ಫರಾಂಡೆ, ಉಪ ಮೇಯರ್ ಅಭಿಜೀತ್ ಜಾಧವ್, ಪಂ. ಸಮಿತಿ ಉಪಾಧ್ಯಕ್ಷ ರೋಹಿತ್ ಕೊಕರೆ, ಉಪಮುಖ್ಯಮಂತ್ರಿ ಕಚೇರಿ ಯ ಉಪ ಕಾರ್ಯದರ್ಶಿ ನಂದಕುಮಾರ್ ಕಟ್ಕರ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.