Advertisement

3ನೇ ಅಲೆ: ಕೋವಿಡ್‌ ಕೇಂದ್ರ ಯಥಾವತ್‌ ಉಳಿಸಿಕೊಳ್ಳಲು ಆದ್ಯತೆ

01:23 PM Jun 19, 2021 | Team Udayavani |

ಬೆಂಗಳೂರು: ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಹಾಗೂಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗಿದ್ದುಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೂನೆರವು ಕಲ್ಪಿಸಲಾಗುತ್ತಿದೆ.ಇದು ಸರ್ವಜ್ಞನಗರ ವಿಧಾನ ಸಭಾಕ್ಷೇತ್ರದ ಸ್ಥಳೀಯ ಶಾಸಕರೂಆಗಿರುವಮಾಜಿ ಸಚಿವ ಕೆ.ಜೆ.ಜಾರ್ಜ್‌ ಅವರಮಾತು. ಉದಯವಾಣಿಜತೆ ಕೊರೊನಾನಿಯಂತ್ರಣ ಕುರಿತು ಮಾತನಾಡಿದ ಅವರು, 2ನೇ ಅಲೆ ಎದುರಿಸಿದ ಬಗೆ ಹಾಗೂ ಮೂರನೇ ಅಲೆಎದುರಿಸುವ ಬಗೆ ಮಾಹಿತಿ ನೀಡಿದರು.

Advertisement

ನಿಮ್ಮ ಕ್ಷೇತ್ರದಲ್ಲಿ ಕೊರೊನಾನಿರ್ವಹಣೆ ಹೇಗಿದೆ?

ಕೋವಿಡ್‌ ನಿರ್ವಹಣೆಗಾಗಿ ಕ್ಷೇತ್ರದ 8 ವಾರ್ಡ್‌ಗಳಲ್ಲೂ ಜ್ವರ ಪರೀಕ್ಷಾ ಕ್ಲಿನಿಕ್‌ ತೆರೆದು ಜನರಆರೋಗ್ಯ ಪರೀಕ್ಷೆ ನಡೆಸಲಾಗಿದೆ.ವಸತಿ ಸಚಿವ ವಿ.ಸೋಮಣ್ಣಅವರು ನಮ್ಮ ಭಾಗದಕೋವಿಡ್‌ ಉಸ್ತುವಾರಿ ಸಚಿವರಿದ್ದು ಅವರ ಸಹಕಾರವನ್ನುಪಡೆಯಲಾಗಿದೆ. ಹಾಗೆಯೇ ಬಿಬಿಎಂಪಿಯ ಹಿರಿಯಅಧಿಕಾರಿಗಳ ಮತ್ತುಸ್ಥಳೀಯ ಆರೋಗ್ಯ ಅಧಿಕಾರಿಗಳ ಸಹಕಾರ ಪಡೆದುಕೊಂಡು ಕೋವಿಡ್‌ ಸೋಂಕಿನ ನಿಯಂತ್ರಣಸಮರ್ಪಕವಾಗಿ ನಿರ್ವಹಿಸಲಾಗಿದೆ.

ಕ್ಷೇತ್ರದಲ್ಲಿ ಬೆಡ್‌ ಸಮಸ್ಯೆ ಹೇಗೆನಿರ್ವಹಿಸಿದ್ದೀರಿ?

ಆರಂಭಿಕ ಹಂತದಲ್ಲಿ ಕೋವಿಡ್‌ಸೋಂಕಿತರನ್ನು ಬಿಬಿಎಂಪಿ ಹೋಮ್‌ಐಸೋಲೆಷನ್‌ ಮಾಡಿತು. ಹೀಗಾಗಿ ಇತರೆಕ್ಷೇತ್ರದಲ್ಲಿ ಕಾಣಿಸಿಕೊಂಡ ಬೆಡ್‌ ಸಮಸ್ಯೆ ನಮ್ಮಕ್ಷೇತ್ರದಲ್ಲಿ ಕೂಡ ಕಾಣಿಸಿಕೊಂಡಿತು. ಅಂಬೇಡ್ಕರ್‌ಮೆಡಿಕಲ್‌ ಕಾಲೇಜಿನಲ್ಲಿ ಆಕ್ಸಿಜನ್‌ ಮತ್ತುವೆಂಟಿಲೇಟರ್‌ ಸೌಲಭ್ಯವುಳ್ಳ100 ಹಾಸಿಗೆ ವ್ಯವಸ್ಥೆಕಲ್ಪಿಸಿ, ಜನರ ಆರೋಗ್ಯದ ಬಗ್ಗೆ ಕಾಳಜಿತೋರಲಾಯಿತು.

Advertisement

ಕೋವಿಡ್‌ ಸಂಕಷ್ಟದ ವೇಳೆ ಕ್ಷೇತ್ರದಲ್ಲಿನೆರವು ಹೇಗಿತ್ತು?

ಕ್ಷೇತ್ರದಲ್ಲಿ ಕೊಳೆಗೇರಿ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂಥವರಿಗಾಗಿಯೇ ಸುಮಾರು 1ಲಕ್ಷಕ್ಕೂ ಅಧಿಕ ಆಹಾರದ ಕಿಟ್‌ ವಿತರಣೆಮಾಡಲಾಗಿದೆ. ಹಾಗೇ ಆಟೋ,ಗೂಡ್ಸ್‌ ಚಾಲಕರಿಗೆ ಒಂದುತಿಂಗಳಿಗೆ ಸಾಕಾಗುವಷ್ಟು ದಿನಸಿಸಾಮಗ್ರಿಗಳನ್ನು ಕ್ಷೇತ್ರದ ಬ್ಲಾಕ್‌ಮತ್ತು ವಾರ್ಡ್‌ ಮಟ್ಟದಲ್ಲಿಹಂಚಿಕೆ ಮಾಡಲಾಗಿದೆ.

ಕ್ಷೇತ್ರದಲ್ಲಿ ಕೋವಿಡ್‌ ಲಸಿಕೆ ನೀಡುವ ಕಾರ್ಯ ಹೇಗೆನಡೆಯುತ್ತಿದೆ?

ಈಗಾಗಲೇ ಸರ್ವಜ್ಞ ನಗರ ಹೆಲ್ತ್‌ಕೇರ್‌ ಟ್ರಸ್ಟ್‌ಮೂಲಕ ಕಡು ಬಡವರಿಗೆ , ಕಾರ್ಮಿಕರಿಗೆಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕೋವಿಡ್‌ ಸೋಂಕಿತರ ಜತೆಗೆಕೋವಿಡೇತರ ರೋಗಿಗಳ ಬಗ್ಗೆ ಕೂಡ ಕಾಳಜಿತೋರಲಾಗಿದೆ.

ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ಷೇತ್ರದಲ್ಲಿಯಾವ ರೀತಿ ಕೆಲಸಗಳು ಸಾಗಿವೆ?

ಕ್ಷೇತ್ರದಲ್ಲಿ ಸುಮಾರು 30 ಸಾವಿರ ಅಂಗನವಾಡಿಗಳಿಗೆ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ಹಾಗೆಯೇಸುಮಾರು 19 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ರೂಮ್‌ ತೆರೆಯಲಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ಕೌಶಲ್ಯಅಭಿವೃದ್ಧಿಕೇಂದ್ರ ಸ್ಥಾಪನೆ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಗಳ ನೆರವು ಯಾವರೀತಿಯಲ್ಲಿ ಸಿಗುತ್ತಿದೆ?

ಕ್ಷೇತ್ರದಲ್ಲಿ ಅಂಬೇಡ್ಕರ್‌ ವೈದ್ಯಕೀಯ ಕಾಲೇಜುನಮಗೆ ಎಲ್ಲಾ ರೀತಿಯ ಸಹಕಾರ ನೀಡಿದೆ. ಸತತ24 ಗಂಟೆ ವೈದ್ಯಕೀಯ ಸೇವೆ ನೀಡುವ ಮೂಲಕವೈದ್ಯಕೀಯ ಸಿಬ್ಬಂದಿ ಉತ್ತಮವಾದ ಸಹಕಾರನೀಡಿದರು.3ನೇ ಅಲೆ ನಿಯಂತ್ರಣಕ್ಕೆ ಕ್ಷೇತ್ರವಾರುಸಿದ್ಧತೆ ಹೇಗಿದೆ?ಕೋವಿಡ್‌ ನಿಯಂತ್ರಣಕ್ಕಾಗಿ ರೂಪಿಸಲಾಗಿರುವಕೋವಿಡ್‌ ಸೆಂಟರ್‌ಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲುಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

­ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next