Advertisement

ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಫೌಂಡೇಶನ್‌ನಿಂದ 25,000 ಲಸಿಕೆ

03:20 PM Jun 15, 2021 | Team Udayavani |

ಬೆಂಗಳೂರು: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ಫೌಂಡೇಶನ್‌ಯಿಂದ 25 ಸಾವಿರ ಕೊರೊನಾಲಸಿಕೆ ನೀಡಲು ತೀರ್ಮಾನಿಸಲಾಗಿದೆ.

Advertisement

ಕೊರೊನಾ ಲಸಿಕೆ ಕೇಂದ್ರಗಳಿಗೆಸೋಮವಾರ ಭೇಟಿ ನೀಡಿ ಪರಿಶೀಲನೆನಡೆಸಿದ ನಂತರ ಮಾತನಾಡಿದ ಕೊರೊನಾಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಕ್ಷೇತ್ರದಲ್ಲಿ ಇದುವರೆಗೂ15,000 ಲಸಿಕೆ ನೀಡಲಾಗಿದ್ದು ಇನ್ನೂ 10,000ಲಸಿಕೆ ಕೊಡಲಾಗುವುದು ಎಂದು ಹೇಳಿದರು.

ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿಕ್ರಮ ವಹಿಸಲಾಗಿದೆ. ಪ್ರತಿಕೊಳೆಗೇರಿಯಲ್ಲೂ ಜನರ ಮನೆಗಳಸಮೀಪವೇ ಲಸಿಕೆ ನೀಡುವ ಕೆಲಸಆಗುತ್ತಿದೆ. ಬೀದಿಬದಿ ವ್ಯಾಪಾರಿಗಳು,ಸೆಕ್ಯುರಿಟಿ ಗಾರ್ಡ್‌, ಆಟೋ ಚಾಲಕರುಸೇರಿದಂತೆ ಬಿಪಿಎಲ್‌ ಕಾರ್ಡ್‌ಕುಟುಂಬಗಳಿಗೆ ಲಸಿಕೆ ನೀಡಲಾಗುತ್ತಿದೆಎಂದು ತಿಳಿಸಿದರು.ಈಗಾಗಲೇ ಸರ್ಕಾರದಿಂದ 45 ವರ್ಷಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

18ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಲಸಿಕೆಅಭಿಯಾನ ಪ್ರಾರಂಭ ಮಾಡಲಾಗುವುದುಎಂದ ಅವರು, ಬಿಬಿಎಂಪಿ ವತಿಯಿಂದಆದ್ಯತಾ ವಲಯದ ಜನರಿಗೆ ವ್ಯಾಕ್ಸಿನ್‌ನೀಡಲಾಗುತ್ತಿದೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಸದ್ಯದ ಅಂಕಿ-ಅಂಶದಪ್ರಕಾರ ಶೇ. 30 ರಿಂದ 35 ರಷ್ಟು ಜನರಿಗೆಲಸಿಕೆ ನೀಡಲಾಗಿದೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next