Advertisement

ಲಾಕ್‌ಡೌನ್‌ ಸಡಿಲಿಕೆ: ರಸ್ತೆಗಳಲ್ಲಿ ಜನವೋ ಜನ

08:15 PM Jun 15, 2021 | Team Udayavani |

ತುಮಕೂರು: ಮಹಾಮಾರಿ ಕೊರೊನಾ ಇನ್ನೂಜಿಲ್ಲೆಯಿಂದ ದೂರವಾಗಿಲ್ಲ. ಆದರೆ, ಸೋಂಕುಕಡಿಮೆಯಾಗುತ್ತಿರುವುದಕ್ಕೆ ಜನರಿಗೆ ಅನುಕೂಲವಾಗಲಿಎಂದು ಜಿಲ್ಲಾಡಳಿತ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ ಅದನ್ನು ಜನ ಅರಿಯದೇ ಕೊರೊನಾ ನಿಯಮ ಮೀರಿ ಎಗ್ಗಿಲ್ಲದೇ ವಾಹನಗಳಲ್ಲಿ ಸಂಚಾರ ಆರಂಭಿಸಿದ್ದಾರೆ.

Advertisement

ಕಳೆದ 2-3 ದಿನಗಳಿಂದ ಪಾಸಿವಿಟಿದರ ಕಡಿಮೆಯಾಗಿ ಶೇಕಡ ಆರು, ಏಳು ಬರುತ್ತಿತ್ತು. ಸರ್ಕಾರಸೋಂಕು ಕಡಿಮೆಯಾಗಬಹುದು ಎಂದು ನಿರ್ಬಂಧಿತಲಾಕ್‌ಡೌನ್‌ಗೆ ಅವಕಾಶ ನೀಡಿ ದಿನಸಿ ಮತ್ತು ಅಗತ್ಯವಸ್ತು ಖರೀದಿಗೆ ಸ್ವಲ್ಪ ಸಡಿಲಿಕೆ ಮಾಡಿದ್ದೇ ತಡ ಸೋಮವಾರ ಕೊರೊನಾ ಮರೆತು ಲೀಲಾ ಜಾಲವಾಗಿ ವಾಹನಗಳಲ್ಲಿ ಎಂದಿನಂತೆ ಸಂಚಾರ ಆರಂಭಿಸಿದರು.

ಇದರಿಂದಸಹಜವಾಗಿಯೇ ಸಂಚಾರ ಸಮಸ್ಯೆ ಉಂಟಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿನಗರದಲ್ಲಿ ಜ್ಯೂವೆಲ್ಲರಿ, ಜವಳಿ ಹಾಗೂ ಗ್ಯಾರೇಜ್‌ಗಳನ್ನು ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆಮತ್ತೆ ಭಾನುವಾರ ಸಂಜೆ ಬಟ್ಟೆ ಅಂಗಡಿ, ಚಿನ್ನ ಬೆಳ್ಳಿಅಂಗಡಿ ಹಾಗೂ ಗ್ಯಾರೇಜ್‌ ಗಳಿ ಆರಂಭವಾದರೆ ಇನ್ನೂ ಜನ ಸಂಚಾರ ಅಧಿಕವಾಗುತ್ತದೆ ಎಂದು ಈ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿವೈ.ಎಸ್‌.ಪಾಟೀಲ ಆದೇಶ ಹೊರಡಿಸಿದರು.

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next