Advertisement

ಎರಡನೇ ಅಲೆ: ಹೊಸಬರೇ ಹೆಚ್ಚು !

02:33 PM Apr 01, 2021 | Team Udayavani |

ಬೆಂಗಳೂರು: ಕೋವಿಡ್ ಎರಡನೇ ಅಲೆಯಮೊದಲ ಆದ್ಯತೆ ಹೊಸಬರೇ ಆಗಿದ್ದಾರೆ !ಹೌದು, ಎರಡನೇ ಅಲೆ ಆರಂಭವಾದಬಳಿಕ ಸೋಂಕು ತಗುಲಿರುವವರ ಪೈಕಿಬಹುತೇಕರು ಹೊಸಬರೇ ಇದ್ದು,ಇವರಿಗೆ ಮೊದಲ ಬಾರಿ ಕೋವಿಡ್ ತಗುಲಿದೆ.

Advertisement

ಈಗಾಗಲೇ ಸೋಂಕುತಗುಲಿದ್ದವರಿಗೆ ಚಿಕಿತ್ಸೆ ಸಂದರ್ಭದಲ್ಲಿ ರೋಗದವಿರುದ್ಧ ಹೋರಾಟ ನಡೆಸುವ ಪ್ರತಿಕಾಯಗಳು(ಆ್ಯಂಟಿಬಾಡಿ ) ಉತ್ಪತ್ತಿಯಾಗಿರುತ್ತವೆ. ಅವುಗಳ ಶಕ್ತಿಮುಂದುವರಿದ ಕಾರಣದಿಂದ ಸದ್ಯ ಸೋಂಕು ಹೆಚ್ಚುಹೊಸಬರಿಗೆ ತಗುಲುತ್ತಿದೆ ಎನ್ನುತ್ತಾರೆ ತಜ್ಞರು.

ಸದ್ಯ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ ಮಾಹಿತಿಪ್ರಕಾರ, ಎರಡನೇ ಅಲೆ ಆರಂಭವಾದ ಮಾರ್ಚ್‌ನಿಂದೀಚೆಗೆ ಸೋಂಕು ತಗುಲಿ ಆಸ್ಪತ್ರೆ ದಾಖಲಾಗಿರುವರೆಲ್ಲಾ ಮೊದಲ ಬಾರಿ ಕೊರೊನಾ ತಗುಲಿರುವವರಿದ್ದಾರೆ.

ಪುನಾರಾವರ್ತನೆ ಪ್ರಮಾಣಸಾಕಷ್ಟು ಕಡಿಮೆ ಇದೆ. ಒಟ್ಟಾರೆ ಸೋಂಕಿತರ ಪೈಕಿ ಶೇ99 ಹೊಸಬರೇ ಇದ್ದು, ಶೇ.1ಕ್ಕಿಂತಲೂ ಕಡಿಮೆಸೋಂಕು ಪುನರಾವರ್ತನೆಯಾದವರು ಎಂದುಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ಈಗಾಗಲೇಸೋಂಕು ತಗುಲಿಸಿಕೊಂಡವರಿಗಿಂತ, ಸೋಂಕಿನಿಂದಅಂತರ ಕಾಯ್ದುಕೊಂಡವರು ಇನ್ನಷ್ಟು ಹೆಚ್ಚುಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಮುಖ್ಯವಾಗಿ ದೇಹದಲ್ಲಿ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳುವರಿಂದ ವೈರಸ್‌ ನಿಂದಅಂತರ ಕಾಯ್ದುಕೊಳ್ಳಬಹುದು ಎನ್ನುತ್ತಾರೆ ವೈದ್ಯರು.

Advertisement

ಲಕ್ಷಣ ಇಲ್ಲದವರಿಗೆ ಸಾಧ್ಯತೆ ಹೆಚ್ಚು: ಕಳೆದ ಬಾರಿಸೋಂಕು ತಗುಲಿದ್ದವರ ಪೈಕಿ ಅನೇಕರು ಯಾವುದೇ ಲಕ್ಷಣಗಳಿಲ್ಲದೇ ಗುಣಮುಖರಾಗಿದ್ದಾರೆ.ಇಂತಹವರಿಗೆ ದೇಹದಲ್ಲಿ ರೋಗ ಪ್ರತಿಕಾಯಗಳುಹೆಚ್ಚು ಉತ್ಪತ್ತಿಯಾಗಿರುವುದಿಲ್ಲ. ಹೀಗಾಗಿ, ಲಕ್ಷಣಹೆಚ್ಚಿದ್ದವರಿಗೆ ಹೋಲಿಸಿದರೆ ಇಂತಹವರಿಗೆ ಮತ್ತೆಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.

ಸೋಂಕುಕಳೆದ ಬಾರಿ ಸಾಕಷ್ಟು ಹಾನಿ ಮಾಡಿದ್ದರೆ ಈ ಬಾರಿಅಂತಹವರಿಗೆ ಹೆಚ್ಚು ಲಕ್ಷಣಗಳಿರುವುದಿಲ್ಲ. ಅಲ್ಲದೆ,ಸೋಂಕು ಕೂಡಾ ಹೆಚ್ಚು ಬಾಧಿಸುವುದಿಲ್ಲ ಎನ್ನುತ್ತಾರೆರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕಡಾ.ನಾಗರಾಜ್‌.

ಶೇ.5 ಪುನರಾವರ್ತನೆ ಸಾಧ್ಯತೆ: ಈಗಾಗಲೇ ನಮಗೆಸೋಂಕು ಬಂದು ಹೋಗಿದೆ ಮತ್ತೆ ಬರುವುದಿಲ್ಲಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ,ಆಧ್ಯಯನಗಳ ಪ್ರಕಾರ ಸೂಕ್ತ ಪ್ರಮಾಣದಲ್ಲಿ ರೋಗಪ್ರತಿಕಾಯಗಳು ದೇಹದಲ್ಲಿ ಅಭಿವೃದ್ಧಿಯಾಗಿರದಿದ್ದರೆಮತ್ತೆ ಸೋಂಕು ಬರುತ್ತದೆ. ಶೇ.5 ಮಂದಿಗೆ ಸೋಂಕುಪುನರಾವರ್ತನೆಯಾಗುವ ಸಾಧ್ಯತೆಗಳಿರುತ್ತವೆ.ಹೀಗಾಗಿ, ಎಚ್ಚರಿಕೆ ವಹಿಸಲೇಬೇಕು ಎಂದುಡಾ.ನಾಗರಾಜ್‌ ತಿಳಿಸಿದ್ದಾರೆ.

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next