Advertisement

ದಾಖಲೆ ಸಂಗ್ರಹದಲ್ಲೇ ಕಾಲಹರಣ

06:25 PM Oct 21, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ ವಾರಿಯರ್‌ ಗೀತಾ ಕುಟುಂಬಕ್ಕೆ ಸರ್ಕಾರದ ಪರಿಹಾರ ಇನ್ನೂ ಸಿಕ್ಕಿಲ್ಲ. ಅಗತ್ಯ ದಾಖಲೆಗಳ ಸಂಗ್ರಹ ನಡೆಯುತ್ತಿದೆ. ಕೋವಿಡ್ ವಾರಿಯರ್ಗಳಾದ ಪೊಲೀಸರು, ಆರೋಗ್ಯ ಇಲಾಖೆ ನೌಕರರು ಸೇರಿ 290ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದು, ಇವರಲ್ಲಿ 170 ಜನ ಪೊಲೀಸರು ಮತ್ತು 120 ಜನ ಖಾಸಗಿ ಮತ್ತು ಸರ್ಕಾರಿ ಆರೋಗ್ಯ ಸಿಬ್ಬಂದಿಗೆ ಸೋಂಕು ದೃಢಪಟ್ಟು ಎಲ್ಲರೂ ಕೋವಿಡ್‌ ಗೆದ್ದು ಆಸ್ಪತ್ರೆಯಿಂದ ಹೊರಬಂದಿದ್ದಾರೆ.

Advertisement

ಜಿಲ್ಲೆಯ ಗುರುಮಠಕಲ್‌ ತಾಲೂಕು ಕೌಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿದ್ದ ಗೀತಾ ಅ.1ರಂದು ಸಾವನ್ನಪ್ಪಿದ್ದು, 10 ವರ್ಷಗಳಿಂದ ಆರೋಗ್ಯಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಅವರ ಪತಿಗೂ ಕೋವಿಡ್‌ಸೋಂಕು ದೃಢಪಟ್ಟಿತ್ತು. ಕೋವಿಡ್‌ ಸೋಂಕಿಗೆ ತುತ್ತಾದ ದಂಪತಿಗಳಿಬ್ಬರು ಯಾದಗಿರಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ  ಇತರೆ ಕಾಯಿಲೆಯ ಪರಿಣಾಮ ತೀವ್ರ ಉಸಿರಾಟದ ತೊಂದರೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದ ಗೀತಾ ಅಕಾಲಿಕ ಸಾವಿಗೆ ಟ್ವೀಟ್‌ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದ ಆರೋಗ್ಯ ಸಚಿವ ಶ್ರೀರಾಮಲು ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಹಾಗೂ ಸವಲತ್ತು ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಕೋವಿಡ್‌ ವಾರಿಯರ್‌ ಸೋಂಕಿನಿಂದ ಮೃತಪಟ್ಟಿದ್ದಕ್ಕೆ ಗುರುಮಠಕಲ್‌ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಕೌಳೂರು ಪಿಎಚ್‌ಸಿ ಸಿಬ್ಬಂದಿ ಮೃತಪಟ್ಟಿದ್ದು, ಪರಿಹಾರ ವಿತರಣೆಗೆ ಸಂಬಂಧಿ ಸಿದಂತೆ ದಾಖಲೆ ಸಂಗ್ರಹಿಸಲಾಗುತ್ತಿದೆ. ಅಗತ್ಯ ದಾಖಲೆ ಸಂಗ್ರಹಿಸಿ ಸರ್ಕಾರಕ್ಕೆ ಕಳಿಸಲಾಗುತ್ತದೆ. – ಇಂಧುಮತಿ ಕಾಮಶೆಟ್ಟಿ, ಡಿಎಚ್‌ಒ, ಯಾದಗಿರಿ

ಸರ್ಕಾರಿ ಕೋವಿಡ್‌ ವಾರಿಯರ್ಸ್ ಗಳು ಸಾವನ್ನಪ್ಪಿದರೆ ತಕ್ಷಣವೇ 30 ಲಕ್ಷ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಸರ್ಕಾರಕ್ಕೆ ಜನರ ನೋವಿನ ಅರಿವಿಲ್ಲ. ಆಳುವವರು ಜನರ ಕಷ್ಟ ಆಲಿಸಲು ತಾಯಿ ಹೃದಯಬೇಕು. ಬಡ ಪರಿಸ್ಥಿತಿಯಲ್ಲಿರುವ ವಾರಿಯರ್‌ ಕುಟುಂಬದ ನೋವು ಆಲಿಸಿ ವೈಯಕ್ತಿಕ ಪರಿಹಾರ ಘೋಷಿಸಿದ್ದೇನೆ. ಆದರೇ ಈ ಸರ್ಕಾರ ಮತ್ತು ಮಂತ್ರಿಗಳು ಕೇವಲ ಪೋಸ್‌ ಕೊಡುತ್ತಿದ್ದಾರೆ. -ನಾಗನೌಡ ಕಂದಕೂರ, ಗುರುಮಠಕಲ್‌ ಜೆಡಿಎಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next