Advertisement

ಕೊರೊನಾ: ಬೆಳೆಗಾರರಿಗೆ ಕಹಿಯಾದ ಮಾವು

07:10 PM May 19, 2021 | Team Udayavani |

ಚೇಳೂರು: ಪ್ರಸ್ತುತ ವರ್ಷ ಮಾವಿನ ಇಳುವರಿ ಕಡಿಮೆ ಇದ್ದರೂ,ಬಂದತಹ ಇಳುವರಿಗೆ ಸರಿಯಾದ ಬೆಲೆಯೂ ಇಲ್ಲ. ಜತೆಗೆಕೊರೊನಾದ ಸೋಂಕಿನಿಂದ ಮಾವು ಬೆಳೆಗಾರರು ಹಾಗೂವರ್ತಕರು ಕಂಗಾಲಾಗಿದ್ದಾರೆ.

Advertisement

ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರು ವಾಸಿಯಾದ ಮಾರುಕಟ್ಟೆ ಗುಬ್ಬಿ ತಾಲೂಕಿನ ಚೇಳೂರು. ಈ ವರ್ಷ ಮಾವಿನ ಇಳುವರಿ ಕಡಿಮೆಯಾಗಿದ್ದು, ಇದಕ್ಕೆ ಸೂಕ್ತವಾದ ಬೆಲೆ ಸಿಗದೆ ರೈತರುಆತಂಕಕ್ಕಿಡಾಗಿದ್ದಾರೆ. ಗಿಡದಿಂದ ಕಟಾವು ಮಾಡಿ ಕೊರೊನಾ ಮಾರ್ಗಸೂಚಿ ಅನ್ವಯ ಮಾರುಕಟ್ಟೆಗೆ ತಂದರೆ ಕೊರೊನಾಪರಿಣಾಮ ಕೇಳುವವರು ಇಲ್ಲವಾಗಿದೆ.

ಇಳಿದ ಮಾವಿನ ದರ: ಚೇಳೂರಿನ ಎಪಿಎಂಸಿ ಉಪಮಾರುಕಟ್ಟೆಯಲ್ಲಿ 21 ಮಾವಿನ ಮಂಡಿಗಳು ಜತೆಗೆ ಗ್ರಾಮದ ಸುತ್ತಹಲವು ಮಾವಿನ ಮಂಡಿಗಳಿವೆ. ಬಾದಮಿಗೆ 20 ರಿಂದ 23 ರೂ.,ರಸಪುರಿಗೆ 8 ರಿಂದ 10 ರೂ. ಮಲಗೋವಾಗೆ 15 ರಿಂದ 20 ರೂ.,ತೊತ್ತಪುರಿಗೆ 6 ರಿಂದ 8 ರೂ., ಸೆಂದೊರೂ 6 ರಿಂದ 8 ರೂ.,ಬಾನೀಷ್‌ 10 ರಿಂದ 12 ರೂ. ಹಾಗೂ ನಾಟಿಮಾವುಗೆ 8 ರೂ.ಕೆ.ಜಿ.ಗೆ ಮಾತ್ರ ಸಿಗುತ್ತಿದೆ. ರೈತರು ಇದರ ಜತೆಗೆ ಮಂಡಿ ವರ್ತಕರಿಗೆಕಮಿಷನ್‌ ಸಹ ನೀಡಬೇಕಾಗಿದೆ.ಮೊದಲು ವರ್ತಕರು ರೈತರಿಂದ ಮಾವುಖರೀದಿ ಮಾಡಿ ಬಿಜಾಪುರ, ದೆಹಲಿ, ಪೂನಾಹಾಗೂ ಇತರೆ ಹಲವು ಕಡೆ ಲೋಡ್‌ಗಟ್ಟಲೇಪ್ರತಿದಿನ ಮಾವು ಕಳಿಸುತ್ತಿದ್ದರು. ಲಾಕ್‌ಡೌನ್‌ಹಿನ್ನೆಲೆ ಈಗ ಈ ಮಾರುಕಟ್ಟೆಗೆ ಮಾವು ಖರೀದಿಮಾಡುವ ವರ್ತಕರು ಬರುತ್ತಿಲ್ಲ.

ಜ್ಯೂಸ್‌ ಅಂಗಡಿಗಳಿಗೆ ಸರಬರಾಜು: ಈಗಜ್ಯೂಸ್‌ಮಾಡುವಪ್ಯಾಕ್ಟರಿಗಳಾದಬೆಂಗಳೂರು,ಕೃಷ್ಣಗಿರಿ, ಧಾರವಾಡ, ಬೆಳಗಾವಿ, ಪೂನಾದಂತಹಪಟ್ಟಣಗಳಿಗೆ ಅವರ ಬೇಡಿಕೆಯಂತೆ ಮಾವುಕಳಿಸುತ್ತಿದ್ದೇವೆ. ಇಲ್ಲಿ ಬಂದು ವಹಿವಾಟು ಮಾಡುವುದರಿಂದ ಸೋಂಕುಹರಡಬಾರದೆಂದುಮಾರುಕಟ್ಟೆಯಸುತ್ತ ಸ್ಯಾನಿಟೈಸ್‌ ಮಾಡಿ ವ್ಯವಹಾರವನ್ನು ಮಾಡುತ್ತಿದ್ದೇವೆಎಂದು ವರ್ತಕರು ತಿಳಿಸಿದ್ದಾರೆ.

ಸಿ.ಟಿ.ಮೋಹನ್‌ರಾವ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next