Advertisement

ನೈಟ್‌ ಕರ್ಫ್ಯೂಗೂ ಕಮ್ಮಿ ಆಗದ ಕೋವಿಡ್

04:15 PM Apr 17, 2021 | Team Udayavani |

ತುಮಕೂರು:ಕಲ್ಪತರು ನಾಡಿನ ಜನರಲ್ಲಿ ಹೆಚ್ಚು ಭೀತಿಹುಟ್ಟಿಸುತ್ತಿರುವ ರೂಪಾಂತರಿ ಕೊರೊನಾ ವೈರಸ್‌ಒಂದೇ ದಿನಕ್ಕೆ 450ರಿಂದ 545ರವರೆಗೆ ಸೋಂಕಿತರುಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಮನೆಮಾಡುತ್ತಿದೆ.ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ಹೆಚ್ಚು ವ್ಯಾಪಿಸುತ್ತಿರುವ ಜಿಲ್ಲೆಗಳಲ್ಲಿ ರಾತ್ರಿಕರ್ಫ್ಯೂ ಜಾರಿ ಮಾಡಿದರೂ, ಜಿಲ್ಲೆಯಲ್ಲಿ ಮಾತ್ರಸೋಂಕಿತರ ಸಂಖ್ಯೆಯಲ್ಲಿ ಕಡಿಮೆ ಕಂಡು ಬರುತ್ತಿಲ್ಲ.

Advertisement

ಕಳೆದ 2020ರ ಏಪ್ರಿಲ್‌ ತಿಂಗಳಲ್ಲಿ ದಿನಕ್ಕೆ 25ರಿಂದ30 ಸೋಂಕಿತರ ಪತ್ತೆ ಆಗುತ್ತಿದ್ದರು.ಆದರೆ, ಈ ವರ್ಷ ಕೊರೊನಾ 2ನೇಅಲೆ ತನ್ನ ವೇಗವನ್ನುಹೆಚ್ಚಿಸಿಕೊಂಡು ಒಂದೇ ಬಾರಿನೂರಾರು ಜನರಲ್ಲಿ ಸೋಂಕುಕಾಣಿಸಿಕೊಳ್ಳುತ್ತಿದೆ.ಕೊರೊನಾರ್ಭಟ ಹೆಚ್ಚುತ್ತಿದ್ದರೂ ಜನ ಕೊರೊನಾಮರೆತು ಎಲ್ಲ ಕಡೆ ಓಡಾಡುತ್ತಿದ್ದಾರೆ.

ಇನ್ನೂ ಸಾಮಾಜಿಕ ಅಂತರ ಇಲ್ಲ, ಕೈ ತೊಳೆಯುತ್ತಿಲ್ಲ, ಮಾಸ್ಕ್ ಹಾಕುವುದುಮರೆತು ಬಿಟ್ಟಿದ್ದಾರೆ. ವಿವಾಹ ಸೇರಿಎಲ್ಲ ಸಮಾರಂಭಗಳಲ್ಲಿ ಎಂದಿನಂತೆ ಭಾಗವಹಿಸುತ್ತಿದ್ದಾರೆ. ಆದರೆ, ಈಗ ಕೊರೊನಾ 2ನೇಅಲೆಯ ಕೊರೊನಾ ವೈರಸ್‌ ಭೂತ ತೀವ್ರಗೊಳ್ಳುತ್ತಿದ್ದು,ಇದನ್ನು ಎದುರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ.ಈಗ ಬರುತ್ತಿರುವ ಆರೋಗ್ಯ ಇಲಾಖೆ ಮಾಹಿತಿಪ್ರಕಾರ ಒಂದು ದಿನಕ್ಕೆ ಕನಿಷ್ಠ 450 ರಿಂದ 545ರಒಳಗೆ ಕೊರೊನಾ ಸೋಂಕಿತರು ಆಸ್ಪತ್ರೆಗೆದಾಖಲಾಗುತ್ತಿದ್ದಾರೆ.

ಶುಕ್ರವಾರದ ವರೆಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿತರು 28,947 ಇದ್ದು,ಇದೇ ರೀತಿ ಜಿಲ್ಲೆಯಲ್ಲಿ ಕೊರೊನಾತನ್ನ ವ್ಯಾಪ್ತಿಯನ್ನು ಹೆಚ್ಚುಮಾಡುತ್ತಾ ಹೋದರೆಮೇ ವೇಳೆಗೆಸೋಂಕಿತರು 30ಸಾವಿರ ಮೇಲಾಗುವಸಾಧ್ಯತೆ ಕಂಡುಬಂದಿದೆ. ಜನವರಿಅಂತ್ಯದಲ್ಲಿ ಜಿಲ್ಲೆಯಲ್ಲಿ ಕಡಿಮೆಯಾಗಿದ್ದ ಕೊರೊನಾಈಗ ಬೇಸಿಗೆಯಲ್ಲಿಹೆಚ್ಚಳವಾಗುತ್ತಿದೆ.

ಎಲ್ಲ ಕಡೆಕೊರೊನಾ ಪರೀಕ್ಷೆ ಮಾಡಿಸಲುಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಒಂದುದಿನಕ್ಕೆ 4000 ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ.ಗ್ರಾಮಗಳಲ್ಲಿ ರೋಗಾಣು ಕಡಿಮೆ ಇದೆ. ಮುಂದೆಗ್ರಾಮಗಳಲ್ಲಿ ಹೆಚ್ಚು ಕಾಣಿಸಿಕೊಂಡರೆ ನಿಯಂತ್ರಣಮಾಡುವುದು ಕಷ್ಟವಾಗಲಿದ್ದು, ಅದಕ್ಕಾಗಿ ಜನ ಜಾಗೃತರಾಗಬೇಕಿದೆ.

Advertisement

65 ಸೊಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ: ಕೊರೊನಾಸೋಂಕಿನಿಂದ ತೀವ್ರ ತೊಂದರೆಗೆ ಒಳಗಾಗಿರುವ 65ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ ಒಟ್ಟು 2,484 ಸಕ್ರಿಯ ಪ್ರಕರಣ ಇದ್ದುತೀವ್ರ ತೊಂದರೆಯಲ್ಲಿ ಇರುವವರಿಗೆ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಸೌಲಭ್ಯಇರುವವರಿಗೆ ಮನೆಯಲ್ಲಿಯೇ ವೈದ್ಯರ ಸಲಹೆಮೆರೆಗೆ ಚಿಕಿತ್ಸೆ ಪಡೆಯಲು ಸೂಚನೆ ನೀಡಲಾಗಿದೆ.ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ 15, ಖಾಸಗಿಆಸ್ಪತ್ರೆಯ ಐಸಿಯುನಲ್ಲಿ 35, ಡಿಸಿಎಚ್‌ ಐಸಿಯುನಲ್ಲಿ15 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕುತ್ತಿದೆ. ಜನರುಕೊರೊನಾ ರೋಗ ಲಕ್ಷಣ ಕಂಡು ಬಂದ ತಕ್ಷಣತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.ಈವರೆಗೆ ಸೋಂಕಿನಿಂದ 25,991 ಜನರುಗುಣಮುಖರಾಗಿ ಮನೆಗೆ ಹೋಗಿದ್ದಾರೆ.ಮೃತಪಟ್ಟಿರುವವರು ಕೊರೊನಾ ಜೊತೆಗೆ ಬೇರೆರೋಗಗಳು ಇದ್ದವರು ಹೆಚ್ಚು ಮೃತರಾಗಿದ್ದಾರೆಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.

ಆಕ್ಸಿಜನ್‌ ಸೌಲಭ್ಯ: ಕೊರೊನಾ ಸೋಂಕಿತರಿಗೆ ಚಿಕಿತ್ಸೆನೀಡಲು ಜಿಲ್ಲೆಯಲ್ಲಿ ಅಗತ್ಯವಾಗಿರುವ ವೆಂಟಿಲೇಟರ್‌,ಆಕ್ಸಿಜನ್‌ ಸೌಲಭ್ಯ ಕಲ್ಪಿಸಲಾಗಿದೆ. ತೀವ್ರ ಉಸಿರಾಟತೊಂದರೆ ಉಂಟಾದವರಿಗೆ ಐಸಿಯುನಲ್ಲಿ ಚಿಕಿತ್ಸೆನಿಡಲಾಗುತ್ತಿದೆ. ಈಗ ಹೆಚ್ಚು ಸರ್ಕಾರಿ ಆಸ್ಪತ್ರೆಗಳಲ್ಲಿಯೇಚಿಕಿತ್ಸೆ ನೀಡಲಾಗುತ್ತಿದ್ದು, ಮುಂದೆ ಸೋಂಕಿತರ ಸಂಖ್ಯೆಹೆಚ್ಚಾದರೆ ಎರಡು ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಿವೆಅಲ್ಲಿಗೆ ಕಳಿಸಲಾಗುವುದು. ನಂತರ ಹಂತ-ಹಂತವಾಗಿಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಮಾಡಲು ವ್ಯವಸ್ಥೆಮಾಡಲಾಗುವುದು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಎಂ.ಬಿ.ನಾಗೇಂದ್ರಪ್ಪ

 

ಚಿ.ನಿ.ಪುರುಷೋತ್ತಮ್‌.

Advertisement

Udayavani is now on Telegram. Click here to join our channel and stay updated with the latest news.

Next