Advertisement

ಬೆಲೆ ಪಾತಾಳಕ್ಕೆ ಟೊಮೆಟೋ ರಸ್ತೆ ಬದಿಗೆ

04:00 PM May 16, 2021 | Team Udayavani |

ಮುಳಬಾಗಿಲು: ಕೋವಿಡ್  ಲಾಕ್‌ಡೌನ್‌ಪರಿಣಾಮ ತಾಲೂಕಿನ ಎನ್‌.ವಡ್ಡಹಳ್ಳಿಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ,ಬೆಳೆಗಾರರು ನೂರಾರು ಬ್ಯಾಕ್ಸ್‌ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದುಹೋಗಿರುವ ಘಟನೆ ನಡೆದಿದೆ.ನೀರಿನ ಸಮಸ್ಯೆ ಮಧ್ಯೆಯೂ ಲಕ್ಷಾಂತರ ರೂ. ಖರ್ಚು ಮಾಡಿ ತಾಲೂಕಿನ ಯಲುವಹಳ್ಳಿ ಗ್ರಾಮದ ಟಿ.ಆರ್‌.ವೇಣುಗೋಪಾಲ್‌ 5ಎಕರೆ, ಶಂಕರ್‌ 1 ಎಕರೆ ಮತ್ತು ರಾಮಚಂದ್ರಪ್ಪ3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು.

Advertisement

ಎರಡು ಮೂರು ದಿನಗಳಿಗೊಮ್ಮೆ750 ರಿಂದ 800 ಬಾಕ್ಸ್‌ ಟೊಮೆಟೋವನ್ನುಎನ್‌.ವಡ್ಡಹಳ್ಳಿ ಮಾರುಕಟ್ಟೆಗೆ ತರುತ್ತಿದ್ದರು.ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದನಂತರ ಬೆಲೆ ಪಾಳಕ್ಕೆ ಕುಸಿದಿದೆ.

ಇಲ್ಲಿರುವ 48ಮಂಡಿಗಳಲ್ಲಿ ಪ್ರತಿ ಬಾಕ್ಸ್‌ ಟೊಮೆಟೋವನ್ನು20-30 ರೂ.ಗೆ ಖರೀದಿಸಲಾಗುತ್ತಿದೆ. ಇದರಿಂದ ರೈತರು ತಾವು ಹಾಕಿರುವ ಬಂಡವಾಳವೂ ಕೈಗೆ ಬರದಂತಾಗಿ ರಸ್ತೆ ಬದಿಯಲ್ಲೇಟೊಮೆಟೋ ಸುರಿದು ವಾಪಸ್ಸಾಗುತ್ತಿದ್ದಾರೆ.ಆಲಂಗೂರು, ಅನಹಳ್ಳಿ, ಪುಂಗನೂರು ರಸ್ತೆಬದಿಯಲ್ಲಿ ಬೆಳೆಗಾರರು ರಾಶಿ ಗಟ್ಟಲೆಟೊಮೆಟೋ ಸುರಿಯುತ್ತಿರುವ ದೃಶ್ಯ ಮನಕಲಕುವಂತಿದೆ.

ಕೂಡಲೇ ಸರ್ಕಾರಬೆಂಬಲ ಬೆಲೆ ನೀಡಬೇಕೆಂದು ರೈತಯಲುವಹಳ್ಳಿ ಟಿ.ಆರ್‌.ವೇಣುಗೋಪಾಲ್‌ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next