Advertisement

ದಾಖಲಾದ ನಾಲ್ಕೇ ದಿನದಲ್ಲಿ ಶೇ. 51 ಸಾವು

12:20 PM Oct 10, 2020 | Suhan S |

ಬೆಂಗಳೂರು: ರಾಜ್ಯದಲ್ಲಿ ಶೇ. 50ಕ್ಕೂ ಅಧಿಕ ಕೋವಿಡ್  ಸೋಂಕಿತರು ಆಸ್ಪತ್ರೆಗೆ ದಾಖಲಾದ ಕೇವಲ ನಾಲ್ಕು ದಿನಗಳಲ್ಲೇ ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ. 17 ಸೋಂಕಿತರು ಆಸ್ಪತ್ರೆಗೆ ಆಗಮಿಸಿದ ದಿನವೇ ಮೃತಪಟ್ಟಿದ್ದಾರೆ!

Advertisement

– ಆಗಸ್ಟ್‌ನಲ್ಲಿ ಕೋವಿಡ್ ಸೋಂಕಿ ನಿಂದ ಮೃತಪಟ್ಟವರ ಸಂಖ್ಯೆಯನ್ನು ಆಧರಿಸಿ ಮೈಸೂರಿನ ಜೀವನ್‌ ರಕ್ಷಾ ಮ್ಯಾನೇಜ್‌ಮೆಂಟ್‌ ಕನ್ಸಲ್ಟಿಂಗ್‌ ಸಂಸ್ಥೆಯು ಅಧ್ಯಯನ ನಡೆಸಿದೆ. ಆ ತಿಂಗಳಲ್ಲಿ ಸಾವನ್ನಪ್ಪಿದ 2,697 ಸೋಂಕಿ ತರ ಪೈಕಿ ಶೇ.51 ಜನ ಆಸ್ಪತ್ರೆಗಳಿಗೆ ದಾಖಲಾಗಿ ನೂರು ತಾಸುಗಳಲ್ಲಿ ಸಾವನ್ನಪ್ಪಿದ್ದಾರೆ. ಕೋಲಾರದಲ್ಲಿ ಈ ಪ್ರಮಾಣ ನೂರರಷ್ಟಿದೆ (ಆಗಸ್ಟ್‌ನಲ್ಲಿ ಆ ಜಿಲ್ಲೆಯಲ್ಲಿ ಸಾವನ್ನಪ್ಪಿದವರೆಲ್ಲರೂ ನೂರು ತಾಸುಗಳಲ್ಲೇ ಮೃತ). ಶೇ. 17 ಜನ ದಾಖಲಾದ ದಿನವೇ ಮೃತಪಟ್ಟಿದ್ದಾರೆ. ಶೇ. 3 ರಷ್ಟು ಸೋಂಕಿತರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ಕೊನೆಯುಸಿರೆಳೆದಿ ರುವುದು ಪತ್ತೆಯಾಗಿದೆ ಎಂದು ಜೀವನ್‌ರಕ್ಷಾ ಇನಿಷಿಯೇಟಿವ್‌ ಆಫ್ ಪ್ರಾಕ್ಸಿಮಾ ಸಂಚಾಲಕ ಮೈಸೂರು ಸಂಜೀವ್‌ ತಿಳಿಸಿದರು.

“ಕೋವಿಡ್‌-19 ಅವಧಿಯಲ್ಲಿ ಸಾವಿಗೆ ಕಾರಣವಾಗುವ ಅಂಶಗಳು’ ಕುರಿತ ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಕಿ-ಅಂಶಗಳು ಕೋವಿಡ್ ವೈರಸ್‌ ಬಗ್ಗೆ ಸೋಂಕಿತರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳಿಗೆ ಕನ್ನಡಿ ಹಿಡಿಯುತ್ತವೆ ಎಂದರು.

ಸಾವಿಗೀಡಾದವರಲ್ಲಿ ಬಹುತೇಕರು ವೈರಸ್‌ ಬಗ್ಗೆ ತಾತ್ಸಾರ ತೋರಿದ್ದು, ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ವ್ಯಾಪಕವಾಗಿ ವೈರಸ್‌ ಹರಡಿದ್ದರಿಂದ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ, ಕಲಬುರಗಿ, ಚಾಮರಾಜನಗರ ಮತ್ತು ಹಾಸನದಲ್ಲಿ ಕನಿಷ್ಠ ಶೇ. 18ರಿಂದ ಗರಿಷ್ಠ ಶೇ. 23 ಜನ ಆಸ್ಪತ್ರೆಗಳಿಗೆ ಬರುವಷ್ಟರಲ್ಲಿ ಮೃತರಾಗಿದ್ದಾರೆ. ಇನ್ನು ಹಲವು ಪ್ರಕರಣಗಳಲ್ಲಿ ಗ್ರಾಮೀಣ ಭಾಗದಲ್ಲಿನ ಸೌಲಭ್ಯಗಳ ಕೊರತೆ ಕಾರಣವಾಗಿವೆ. ಶೇ.40 ರೋಗಿಗಳು ಆಸ್ಪತ್ರೆಗಳಲ್ಲಿ 5-49 ದಿನಗಳ ಅಂತರದಲ್ಲಿ ಚಿಕಿತ್ಸೆಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿ ಬಹಿರಂಗ ಪಡಿಸುತ್ತದೆ ಎಂದೂ ಹೇಳಿದರು.

ಮೃತರಲ್ಲಿ ಹೆಚ್ಚಿನವರಿಗೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ), ವಿಷಮಶೀತ ಜ್ವರದ ಲಕ್ಷಣಗಳುಕಂಡುಬಂದಿದ್ದವು. ಶ್ವಾಸಕೋಶ ತಜ್ಞರ ಕೊರತೆ ಮತ್ತಿತರ ಅಂಶಗಳು ಕಾರಣಎಂದ ಅವರು, ಸಾವನ್ನಪ್ಪಿದವರಲ್ಲಿ ಶೇ.69.19ರಷ್ಟು ಪುರುಷ ಹಾಗೂ ಶೇ. 30.77 ಮಹಿಳೆಯರಿದ್ದಾರೆ. ದೇಶದ ಒಟ್ಟಾರೆ ಕೋವಿಡ್‌-19 ಪಾಸಿಟಿವಿಟಿಪ್ರಮಾಣ ಶೇ. 7.6ರಷ್ಟಿದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದಂತಹ ದೊಡ್ಡ ರಾಜ್ಯಗಳಲ್ಲಿ ಶೇ. 9.7ರಷ್ಟಿದೆ. ಅದೇ ರೀತಿ, ದೊಡ್ಡ ರಾಜ್ಯಗಳಲ್ಲಿ ಮೃತ ಪ್ರಮಾಣ ಶೇ. 78ರಷ್ಟಿದೆ ಎಂದು ಮಾಹಿತಿ ನೀಡಿದರು.

Advertisement

 ಶೇ. 88ಖಾಸಗಿ ಆಸ್ಪತ್ರೆಗಳಲ್ಲಿ ಸಾವು :  ಮೃತಪಟ್ಟ ರೋಗಿಗಳ ಪೈಕಿ ಶೇ.45 ಸಾವು ಕೋವಿಡ್ ವೈರಸ್‌ ಚಿಕಿತ್ಸೆಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಾಗಿದ್ದರೆ, ಶೇ. 27 ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಒಟ್ಟಾರೆ 2,697 ಸಾವುಗಳಲ್ಲಿ 32 ಸೋಂಕಿತರು ತಮ್ಮ ಮನೆಗಳಲ್ಲಿ ಹಾಗೂ 38 ರೋಗಿಗಳು ಆಸ್ಪತ್ರೆಗೆ ತರುವಾಗ ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ದಾಖಲಾದ ಸಾವುಗಳ ಪೈಕಿ ಶೇ. 88 ಖಾಸಗಿ ಆಸ್ಪತ್ರೆಗಳ ಲ್ಲಾಗಿವೆ. ಇನ್ನು ಬೀದರ್‌ನಲ್ಲಿ ಶೇ. 92 ಸಾವು ಕೋವಿಡ್‌-19ಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಾಗಿವೆ. 30 ವರ್ಷ ಮೇಲ್ಪಟ್ಟ 54 ಸೋಂಕಿತರು ಅಸುನೀಗಿದ್ದು, ಇದರಲ್ಲಿ ಶೇ. 37 ಜನ ಬೆಂಗಳೂರು ನಗರಕ್ಕೆ ಸೇರಿದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next