Advertisement

ಕೊರೊನಾ: ಮಹಾ ಗಡಿಯಲ್ಲಿ ತೀವ್ರ ಕಟ್ಟೆಚ್ಚರ

01:30 PM Nov 30, 2021 | Shwetha M |

ಚಡಚಣ: ಕೊರೊನಾ ಹೊಸ ರೂಪಾಂತರ ಒವಿಕ್ರಾನ್‌ ಹರಡುವ ಭೀತಿಯಿದ್ದು ಗಡಿ ಅಂಚಿನಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಧೂಳಖೇಡ ಹಾಗೂ ಶಿರಾಡೋಣ ಹೆದ್ದಾರಿಗಳಲ್ಲಿರುವ ಚೆಕ್‌ ಪೋಸ್ಟ್‌ ಸೇರಿದಂತೆ ತಾಲೂಕಿನ ಗಡಿ ಅಂಚಿನಲ್ಲಿ ಒಟ್ಟು 7 ತಪಾಸಣಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲು ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ಸುರೇಶ ಚವಲರ ತಿಳಿಸಿದರು.

Advertisement

ಧೂಳಖೇಡ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರು 72 ಗಂಟೆಯೊಳಗಿನ ಎನ್‌ಟಿಪಿಸಿಆರ್‌ ನೆಗಟಿವ್‌ ವರದಿ ಕಡ್ಡಾಯವಾಗಿ ಹೊಂದಿರಬೇಕು. ಎರಡೂ ಲಸಿಕೆಗಳನ್ನೂ ಪಡೆದವರಿಗೆ ಮಾತ್ರ ರಾಜ್ಯದೊಳಕ್ಕೆ ಪ್ರವೇಶ ನೀಡಲಾಗುವದು. ಚೆಕ್‌ಪೋಸ್ಟ್‌ ನಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್‌, ಆರೋಗ್ಯ ಹಾಗೂ ಕಂದಾಯ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next