Advertisement

ಗ್ರಾಮದಲ್ಲಿ ಕೋವಿಡ್‌ ಜಾಗೃತಿ ಜಾಥಾ

05:39 PM May 21, 2021 | Team Udayavani |

ಯಳಂದೂರು: ತಾಲೂಕಿನ ಯರಿಯೂರುಗ್ರಾಮದಲ್ಲಿ ಟಾಸ್ಕ್ಫೋರ್ಸ್‌ ಸಮಿತಿಯಿಂದಕೋವಿಡ್‌ ಜಾಗೃತಿ ಜಾಥಾ ನಡೆಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಪಂಸದಸ್ಯರು, ನೌಕರರು, ಅಂಗನವಾಡಿ, ಆಶಾಕಾರ್ಯಕರ್ತೆಯರು ಜಾಥಾ ನಡೆಸಿ, ಕೋವಿಡ್‌ನ ‌ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು.

Advertisement

ಮಾಸ್ಕ್ ಧಾರಣೆ ಮಹತ್ವ, ಅಗತ್ಯ ಸಂದರ್ಭದಲ್ಲಮಾತ್ರ ಹೊರಗೆ ಬರಬೇಕು, ಗುಂಪುಗೂಡಬಾರದು, ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಂಡರೆನಿರ್ಲಕ್ಷಿಸದೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು.ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್‌ಕೇರ್‌ ಸೆಂಟರ್‌ಗೆ ದಾಖಲಾಗಬೇಕು ಎಂದು ಮನವಿ ಮಾಡಲಾಯಿತು.

ಇದೇ ವೇಳೆ ಗ್ರಾಮದಬೀದಿಗಳಿಗೆ ರಾಸಾಯನಿಕ ಸಿಂಪಡಿಸಲಾಯಿತು.ಗ್ರಾಪಂ ಅಧ್ಯಕ್ಷ ಮಹಾದೇವಯ್ಯ, ಪಿಡಿಒ ಮಮತಾಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next