Advertisement

ಮಾಜಿ ಬಿಎಸ್‌ಪಿ ಸಂಸದನ ಪುತ್ರನಿಗೆ 14 ದಿನಗಳ ನ್ಯಾಯಾಂಗ ಕಸ್ಟಡಿ

04:37 PM Oct 22, 2018 | Team Udayavani |

ಹೊಸದಿಲ್ಲಿ : ಇಲ್ಲಿನ ಪಂಚತಾರಾ ಹೊಟೇಲೊಂದರ ಆವರಣದಲ್ಲಿ ಪಿಸ್ತೂಲು ಝಳಪಿಸುತ್ತಾ ಜೀವ ಬೆದರಿಕೆ ಒಡ್ಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಮಾಜಿ ಬಿಎಸ್‌ಪಿ ಸಂಸದ ಆಶಿಷ್‌ ಪಾಂಡೆ ಅವರ ಪುತ್ರನನ್ನು ದಿಲ್ಲಿಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

Advertisement

ಆರೋಪಿಯು ಇನ್ನಷ್ಟು ದಿನಗಳ ಪೊಲೀಸ್‌ ಕಸ್ಟಡಿ ತನಿಖೆಗೆ ಬೇಕಾಗಿಲ್ಲ ಎಂದು ಪೊಲೀಸರು ಹೇಳಿದುದನ್ನು ಅನುಸರಿಸಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಧರ್ಮೇಂದ್ರ ಸಿಂಗ್‌ ಅವರು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. 

ನ್ಯಾಯಾಲಯವು ಈ ಮೊದಲು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆತನ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next