Advertisement

ಕಲಬುರಗಿಯಲ್ಲಿ ವಿರಾಟ ಹಿಂದುಳಿದ ಸಮಾವೇಶಕ್ಕೆ ಕ್ಷಣಗಣನೆ

11:30 AM Oct 30, 2022 | Team Udayavani |

ಕಲಬುರಗಿ: ರಾಜ್ಯದ ಒಬಿಸಿ ಸಮುದಾಯಗಳ ಇತಿಹಾಸದಲ್ಲಿ ಸುವರ್ಣ  ದಿನವೆಂದೇ ಕರೆಯುತ್ತಿರುವ ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದೆ.

Advertisement

ನಾಡಿನ ಎಲ್ಲ ಜಿಲ್ಲೆಗಳಿಂದ ಜನ ಹರಿದು ಬರುತ್ತಿದ್ದಾರೆ. ಮೈಸೂರು, ಮಂಡ್ಯ , ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿಯ ಒಬಿಸಿ ಸಮುದಾಯದ ಬಂಧುಗಳು ರಾತ್ರಿಯೇ ಬಂದಿದ್ದಾರೆ.

ಮುಖ್ಯ ವೇದಿಕೆಯಲ್ಲಿ 11 ಗಂಟೆಯ ಹೊತ್ತಿಗೆ ತುಸು ಜನರು ಕಾಣಿಸುತ್ತಿದ್ದು, ಊಟದ ಮಾತೇ ಮಾಣಿಕೇಶ್ವರಿ ದಾಸೋಹ ಮಂಟಪದಲ್ಲಿ ಜನರು ತುಂಬಿದ್ದಾರೆ. ಜಿಲ್ಲೆಯ ನಾನಾ ಕಡೆಗಳಿಂದ ಬಂದಿರುವ ಜನರು ತುಂಬಾ ಹುರುಪಿನಿಂದ ಓಡಾಡುತ್ತಿದ್ದಾರೆ.

5 ಲಕ್ಷಕ್ಜಿಂತ ಹೆಚ್ಚಿನ ಜನ ಬರುವ ನಿರೀಕ್ಷೆಗೆ ತುಸು ಹಿನ್ನಡೆಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಊಟದ ಮನೆಯಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ ಇದೆ.

Advertisement

ಪೊಲೀಸ್ ಬಂದೋ ಬಸ್ತ್

ಇಡೀ ಸಮಾವೇಶದ ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು ಡಿಸಿಪಿ, 31 ಸಿಪಿಐ, 70 ಪಿಎಸ್ ಐ, 80 ಪೇದೆಗಳು, ನಾಲ್ಕು ಕೆಎಸ್ಆರ್ ಪಿ ತುಕಡಿ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಕಮಿಷನರ್ ಡಾ. ರವಿಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next