Advertisement

Council: ಸರಕಾರಿ ನೌಕರರಿಗೆ ಒಪಿಎಸ್‌ ಯಾವಾಗ: ಬಿಜೆಪಿ

01:15 AM Jul 19, 2024 | Team Udayavani |

ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ಶಿಫಾರಸಿನಂತೆ ಸರಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ ರಾಜ್ಯ ಸರಕಾರದ ಕ್ರಮವನ್ನು ಸ್ವಾಗತಿಸಿ ಅಭಿನಂದಿಸಿದ ವಿಪಕ್ಷ ಸದಸ್ಯರು, ಹಳೇ ಪಿಂಚಣೆ ಯೋಜನೆ (ಒಪಿಎಸ್‌) ಮರು ಜಾರಿ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ತರಾಟೆಗೂ ತೆಗೆದುಕೊಂಡರು.

Advertisement

ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕಣೆ ವಿಚಾರವಾಗಿ ಬಿಜೆಪಿಯ ಎಸ್‌.ವಿ. ಸಂಕನೂರ, ಶಶೀಲ್‌ ಜಿ. ನಮೋಷಿ, ಹಣಮಂತ ನಿರಾಣಿ, ಸುನೀಲ್‌ ವಲ್ಯಾಪುರೆ, ಪ್ರತಾಪ್‌ಸಿಂಹ ನಾಯಕ್‌ ಪ್ರಶ್ನೆ ಕೇಳಿದ್ದರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದ್ದ ಒಪಿಎಸ್‌ ಜಾರಿ ಮತ್ತು ಸರಕಾರಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಜಾರಿ ಕುರಿತು ಸರಕಾರ ಸ್ಪಂದಿಸಿಲ್ಲ. ಅದೂ ಜಾರಿಯಾಗಲಿ. ಸರಕಾರಿ ನೌಕರರಿಗೆ ಈ ಸರಕಾರ ಹಿಂಬಾಕಿ ಕೊಡಬೇಕು. ಜುಲೈ ಅಂತ್ಯಕ್ಕೆ ನಿವೃತ್ತರಾದವರು ಸೌಲಭ್ಯಗಳಿಂದ ವಂಚಿತರಾಗುವುದರಿಂದ ಆ. 1ರ ಬದಲು ಜು. 1ಕ್ಕೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸಭಾನಾಯಕ ಎನ್‌.ಎಸ್‌. ಬೋಸ ರಾಜ್‌ ಪ್ರತಿಕ್ರಿಯಿಸಿ, ಎನ್‌ಪಿಎಸ್‌-ಒಪಿಎಸ್‌ ಸಾಧಕ ಬಾಧಕಗಳ ಕುರಿತು ಕೇಂದ್ರ ಸರಕಾರ ಸಮಿತಿ ರಚಿಸಿದ್ದು, ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದೇವೆ. ಅದರ ಆಧಾರದಲ್ಲಿ ಮುಂದುವರಿಯುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next