Advertisement

ಮಿತಿ ಮೀರಿದ ಭ್ರಷ್ಟಾಚಾರ

06:19 AM Jul 01, 2020 | Lakshmi GovindaRaj |

ಪಿರಿಯಾಪಟ್ಟಣ: ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಲಂಚವಿಲ್ಲದೇ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಕೆ.ವೆಂಕಟೇಶ್‌ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ತಾಲೂಕಾದ್ಯಂತ ಸರ್ಕಾರಿ ಗೋಮಾಳ, ಗ್ರಾಮ ಠಾಣ, ಕೆರೆಗಳ ಒತ್ತುವರಿ ತೆರವುಗೊಳಿಸಲು ತಾಲೂಕು ಆಡಳಿತ ಮುಂದಾಗಿರುವುದು ಸ್ವಾಗತಾರ್ಹ.

Advertisement

ಈ ಒತ್ತುವರಿ ತೆರವು ಕಾರ್ಯ ಪಕ್ಷತೀತವಾಗಿರಬೇಕು. ಆದರೆ ಶಾಸಕ ಕೆ.ಮಹದೇವ್‌  ಅವರೆ 3 ಎಕರೆ ಸರ್ಕಾರಿ ಜಾಗವನ್ನು ಕಬಳಿಕೆ ಹಾಗೂ ಚಟ್ಟೇನಹಳ್ಳಿ ಬಳಿ ನಿರ್ಮಿಸುತ್ತಿರುವ ಲೇಔಟ್‌ನಲ್ಲಿ 5 ಎಕರೆ ಸರ್ಕಾರಿ ಜಾಗ ಕಬಳಿಸುತ್ತಿದ್ದಾರೆ. ಮೊದಲು ತಹಶೀಲ್ದಾರರು ಇದರ ಬಗ್ಗೆ ಕ್ರಮ ವಹಿಸಲಿ, ಅದನ್ನು ಬಿಟ್ಟು ಅಮಾಯಕ ರೈತರು ಉತ್ತುಬಿತ್ತು ವ್ಯವಸಾಯ ಮಾಡುತ್ತಿರುವ ಭೂಮಿಯನ್ನು ಉದ್ದೇಶಪೂರ್ವಕವಾಗಿ ತೆರವು ಗೊಳಿಸುವ ನೆಪದಲ್ಲಿ ಕಿರುಕುಳ ನೀಡುವ ಮೂಲಕ ಶಾಸಕರಿಗೆ ಏಜೆಂಟ್‌ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಕೋವಿಡ್‌-19 ಸಮಸ್ಯೆ ಎದುರಾಗಿದ್ದ ಸಂದರ್ಭದಲ್ಲಿ ನಿರ್ಗತಿಕರಿಗೆ ನೆರವು ನೀಡಲು ಸಾರ್ವಜನಿಕರಿಂದ ಪಡೆದಿದ್ದ ದವಸದಾನ್ಯ ಹಾಗೂ ಹಣಕಾಸಿನ ನೆರವನ್ನು ನಿರ್ಗತಿಕರಿಗೆ ಹಂಚದೆ ಪಂಗನಾಮ ಹಾಕಿದ್ದಾರೆ.  ತಹಶೀಲ್ದಾರ್‌ ಹಾಗೂ  ಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿ, ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಸೇರಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಸುಳ್ಳು ಹೇಳಬೇಡಿ: ಯಾವುದೇ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆಯದೆ ಕಾಮಗಾರಿ ಪ್ರಾರಂಭವಾಗುವುದಿಲ್ಲ. ಆದರೆ ಶಾಸಕ ಮಹದೇವ್‌ಗೆ ಇದರ ಅರಿವಿಲ್ಲ, ಸಿದ್ದರಾಮಯ್ಯನವರ ಅವಧಿಯಲ್ಲಿ ಮಂಜೂರಾದ ಎಲ್ಲಾ  ಅನುದಾನಗಳು ವಾಪಸಾಗಿವೆ. ಅವುಗಳನ್ನು ನಾನು ಸರ್ಕಾರದ ಮಟ್ಟದಲ್ಲಿ ಹೋರಾಡಿ ತಂದಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next