Advertisement

ಕೊರೊನಾ: ತುರ್ತು ಚಿಕಿತ್ಸೆಗೆ ಸಕಲ ಸಿದ್ಧತೆ

09:31 PM Mar 10, 2020 | Lakshmi GovindaRaj |

ಕೊಳ್ಳೇಗಾಲ: ಕೊರೊನಾ ವೈರಸ್‌, ಕೊರೊನಾ ವೈರಸ್‌ ಎಲ್ಲೆಲ್ಲೂ ವೈರಸ್‌ ಸದ್ದು ಮಾಡುತ್ತಿದೆ. ಜನರಲ್ಲಿ ಹೃದಯ ನಡುಕ ಉಂಟು ಮಾಡಿದ್ದು, ಮಹಾಮಾರಿ ಕೊರೊನಾ ವೈರಸ್‌ ಕೊಲ್ಲುವ ಔಷಧಿ ಯಾವುದು? ಇದರಿಂದ ಮುಕ್ತಿ ಯಾವಾಗ ಎಂದು ಸಾರ್ವಜನಿಕರು ಎಲ್ಲೆಡೆ ಪ್ರಶ್ನಿಸುವುದರ ಜೊತೆಗೆ ಭಯಭೀತರಾಗಿದ್ದಾರೆ.

Advertisement

ಕೊರೊನಾ ವೈರಸ್‌ ವಿಶ್ವದಾದ್ಯಂತ ಹರಡಿ ಬಳಿಕ ರಾಜ್ಯಕ್ಕೂ ಕಾಲಿಟ್ಟಿರುವ ವೈರಸ್‌ನಿಂದಾಗಿ ಮತ್ತಷ್ಟು ಭಯಕ್ಕೆ ಒಳಗಾಗಿರುವ ಸಾರ್ವಜನಿಕರು ಇದಕ್ಕೆ ಔಷಧಿ ಇಲ್ಲವೆ ಇದನ್ನು ಕೊಲ್ಲುವ ಶಕ್ತಿ ಯಾವ ದೇಶಕ್ಕೆ ಇದೆ. ಇದರ ಔಷಧಿ ಶೀಘ್ರದಲ್ಲೇ ಮಾರುಕಟ್ಟೆಗೆ ಬಂದು ವೈರಸ್‌ ಒಳಗಾಗದವರಿಗೆ ಸೂಕ್ತ ಚಿಕಿತ್ಸೆ ಲಭ್ಯಗೊಂಡು ಪ್ರಾಣ ಭಯದಿಂದ ಪಾರಾಗಲು ಸಾಧ್ಯವೇ ಎಂದು ಎಲ್ಲೆಡೆ ಚರ್ಚೆ ಭರಾಟೆಯಾಗಿ ನಡೆಯುತ್ತಿದೆ.

ಬೇಸಿಗೆ ಬಿಸಿಲು: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಬಿಸಿಲಿನ ತಾಪಕ್ಕೆ ಕೊರೊನಾ ವೈರಸ್‌ ಹರಡಲು ಸಾಧ್ಯವಿಲ್ಲ ಎಂದು ಕೆಲವರು ನಿಟ್ಟುಸಿರು ಬಿಟ್ಟರೆ, ಮತ್ತೆ ಕೆಲವರು ಯಾವುದೆ ಬಿಸಿಲಿನ ತಾಪವಿದ್ದರೂ ಅಲ್ಲೊಮ್ಮೆ, ಇಲ್ಲೊಮ್ಮೆ ಹರಡುವುದರಿಂದ ಪ್ರಾಣ ಹೋಗುವುದಂತೂ ಶತಸಿದ್ಧವಾಗಿದೆ. ಈ ವೈರಸ್‌ ಯಾರಿಗೂ ತಗಲುದಂತೆ ಆದರೆ ಸಾಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವಲ್ಲಿ ಮುಂದಾಗಿದ್ದಾರೆ.

ತುರ್ತು ಚಿಕಿತ್ಸೆಗೆ ಸಿದ್ಧ: ಕೊರೊನಾ ವೈರಸ್‌ ಎಲ್ಲಾದರೂ ಕಾಣಿಸಿಕೊಂಡ ಕೂಡಲೇ ಅಂತಹವರಿಗೆ ಕೂಡಲೇ ತುರ್ತು ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಐದು ಗಂಡಸರ ಹಾಸಿಗೆ, ಐದು ಹೆಂಗಸರ ಹಾಸಿಗೆಯನ್ನು ಸಿದ್ಧಪಡಿಸಿ, ಅಲ್ಲಿ ನೀಡಬೇಕಾಗಿರುವ ಎಲ್ಲಾ ತುರ್ತು ಚಿಕಿತ್ಸಾ ಯಂತ್ರಗಳನ್ನು ಅಳವಡಿಸಲಾಗಿದೆ.

ಎಲ್ಲೆಡೆ ಕಟ್ಟೆಚ್ಚರ: ಸರ್ಕಾರಕೊರೊನಾ ವೈರಸ್‌ ಪತ್ತೆಯಾದಲ್ಲಿ ಕೂಡಲೇ ಅಂತಹವರ ಮೇಲೆ ನಿಗಾವಹಿಸಿ, ಅದು ಎಲ್ಲೂ ಮತ್ತೂಬ್ಬರಿಗೆ ಹರಡದಂತೆ ತಡೆಗಟ್ಟಬೇಕು ಎಂದು ಸೂಚನೆ ನೀಡಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳನ್ನು ನಾಲ್ಕು ದಿಕ್ಕುಗಳಲ್ಲಿ ಇಬ್ಬರನ್ನು ನೇಮಕ ಮಾಡಿ, ತಮಿಳುನಾಡಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವವರ ತಪಾಸಣೆ ಒಂದೆಡೆಯಾದರೆ, ಮತ್ತೂಂದೆಡೆ ಬೆಂಗಳೂರಿನಿಂದ ಬರುವವರ ತಪಾಸಣೆ ಹೀಗೆ ಹೊರಗಡೆ ಹಾಗೂ ಹೊರ ರಾಜ್ಯಗಳಿಂದ ಬರುವವರ ತಪಾಸಣೆ ಮಾಡುತ್ತಿದ್ದಾರೆ. ಎಲ್ಲೆಡೆ ಕಟ್ಟೆಚ್ಚರ ವಹಿಸಿ ತಪಾಸಣಾ ಕಾರ್ಯ ನಡೆಯುತ್ತಿದೆ.

Advertisement

ಔಷಧಿ ಅಂಗಡಿಗಳ ಮೇಲೆ ನಿಗಾ ಅಗತ್ಯ: ಕೊರೊನಾ ವೈರಸ್‌ನಿಂದ ಭಯಭೀತರಾಗಿರುವ ಸಾರ್ವಜನಿಕರು, ವೈರಸ್‌ನಿಂದ ತಪ್ಪಿಸಿಕೊಳ್ಳಲು ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವ ಮಾಸ್ಕ್ (ಮುಖಗವಸು), ಹ್ಯಾಂಡ್‌ ಸ್ಯಾನಿಟೈಜರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೇವಲ ಔಷಧಿ ಅಂಗಡಿಗಳಲ್ಲಿ ನಿಗದಿ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಔಷಧಿ ಅಂಗಡಿಗಳ ಮೇಲೂ ನಿಗಾ ಇಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆ ಮಾರಾಟ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

ನಿಗದಿಪಡಿಸಿದ ಬೆಲೆಗೆ ಮಾರಾಟ: ಕೊರೊನಾವೈರಸ್‌ ಹರಡದಂತೆ ಸಾರ್ವಜನಿಕರು ಮತ್ತು ಮಕ್ಕಳು ಮಾಸ್ಕ್ ಮತ್ತು ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಬಳಕೆ ಮಾಡಬೇಕು. ಸಾಮಗ್ರಿಗಳ ಮೇಲೆ ನಿಗದಿಪಡಿಸಿದ ಬೆಲೆಗೆ ಮಾರಾಟವಾಗುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಎಂದು ಕೇವಲ ಔಷಧಿ ಅಂಗಡಿಗಳ ಮೇಲೆ ವದಂತಿಗಳು ಹರಡಿದೆ ಎಂದು ಸಪ್ತಗಿರಿ ಮೆಡಿಕಲ್‌ ಮಾಲೀಕ ಸುದರ್ಶನ್‌ ಕುಮಾರ್‌ ಹೇಳಿದ್ದಾರೆ.

ನಗರಸಭೆಗೆ ಸೇರಿದ 31 ವಾರ್ಡ್‌ಗಳಲ್ಲಿ ಕೊರೊನಾ ವೈರಸ್‌ ಬಗ್ಗೆ ಆಟೋಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ವತ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ನಗರಸಭೆ ಕೈಗೊಳ್ಳುವ ಎಲ್ಲಾ ಸ್ವತ್ಛತೆಯ ಕಾರ್ಯಗಳಲ್ಲಿ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಮಹಾಮಾರಿ ಕೊರೊನಾ ವೈರಸ್‌ ಹರಡದಂತೆ ತಡೆಯಲು ಸಾಧ್ಯ.
-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ

ಕೊರೊನಾ ವೈರಸ್‌ ಹರಡದಂತೆ ಎಲ್ಲೆಡೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ವೈರಸ್‌ ಯಾರಿಗಾದರೂ ತಗುಲಿದ ಪಕ್ಷದಲ್ಲಿ ಅಂತಹವರಿಗೆ ತುರ್ತು ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಔಷಧಿ ಅಂಗಡಿಗಳಲ್ಲಿ ಮಾಸ್ಕ್ ಮತ್ತು ಇನ್ನಿತರ ಉಪಕರಣಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ನೀಡಿದ ಕೂಡಲೇ ಅಂತಹ ಔಷಧಿ ಅಂಗಡಿಗಳ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು.
-ಡಾ.ಗೋಪಾಲ್‌, ತಾಲೂಕು ಆರೋಗ್ಯಾಧಿಕಾರಿ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next