Advertisement

ಟ್ರಕ್‌ ಡ್ರೈವರ್‌, ಹೆಲ್ಪರ್‌ ಥಳಿಸಿದ ಪೊಲೀಸ್‌ ಸಿಬಂದಿ ಅಮಾನತು

03:32 PM Jan 24, 2018 | udayavani editorial |

ಕಾನ್ಪುರ, ಉತ್ತರ ಪ್ರದೇಶ : ಇಲ್ಲಿನ ಸಿಕಂದ್ರಾದಲ್ಲಿನ ವಿರಾನಾ ಕ್ರಾಸಿಂಗ್‌ನಲ್ಲಿ ಇಬ್ಬರು ಪೊಲೀಸ್‌ ಸಿಬಂದಿಗಳು ಟ್ರಕ್‌ ಡ್ರೈವರ್‌ ಮತ್ತು ಆತನ ಹೆಲ್ಪರನ್ನು ಜನರ ಎದುರಲ್ಲೇ ಯದ್ವಾ ತದ್ವಾ ಹೊಡೆದು ಹಲ್ಲೆಗೊಳಿಸಿದ ಘಟನೆ ವರದಿಯಾಗಿದೆ. 

Advertisement

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗುತ್ತಲೇ ಜಿಲ್ಲಾ ಪೊಲೀಸ್‌ ಮುಖ್ಯಸ್ಥರು ಆರೋಪಿ ಇಬ್ಬರು ಪೊಲೀಸರಲ್ಲಿ ಒಬ್ಟಾತನನ್ನು ಅಮಾನುತುಗೊಳಿಸಿದ್ದಾರೆ. 

ಸಿಕಂದ್ರ ನಿವಾಸಿಯಾಗಿರುವ ಟ್ರಕ್‌ ಡ್ರೈವರ್‌ ಸುನೀಲ್‌ ಸಿಂಗ್‌ ಮತ್ತು ಆತನ ಹೆಲ್ಪರ್‌ ಆಗಿರುವ ಘತಾಂಪುರದ ಸುನೀಲ್‌ ಕುಮಾರ್‌ ಎಂಬಾತನನ್ನು ಸಾರ್ವಜನಿಕರ ಎದುರೇ ಹೊಡೆದು ಹಲ್ಲೆ ಗೈಯಲಾದ ಘಟನೆಯ ಮೇಲ್ನೋಟದ ತನಿಖೆಯಲ್ಲಿ ಇಬ್ಬರು ಪೊಲೀಸರು ಮತ್ತು  ಒಬ್ಬ ಹೋಮ್‌ ಗಾರ್ಡ್‌, ಅಪರಾಧಿಗಳಾಗಿರುವುದು ಕಂಡುಬಂದಿದೆ ಎಂದು ಪೊಲೀಸ್‌ ಎಸ್‌ಪಿ ರತ್ನಕಾಂತ್‌ ಪಾಂಡೆ ಹೇಳಿದ್ದಾರೆ. 

ಕಾನ್‌ಸ್ಟೆಬಲ್‌ ರಾಜವೀರ್‌ ಸಿಂಗ್‌ ನನ್ನು ಅಮಾನತುಗೊಳಿಸಿರುವುದಾಗಿ ಎಸ್‌ಪಿ ಪಾಂಡೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next