Advertisement

ಲೋಕಸಭಾ ಚುನಾವಣೆಗಾಗಿ ಕೈ ಸಮನ್ವಯ ಸಮಿತಿ

12:45 AM Jan 26, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಸಮನ್ವಯ ಸಾಧಿಸಲು ಎರಡೂ ಪಕ್ಷಗಳ ಸಮನ್ವಯ ಸಮಿತಿ ರಚಿಸಿರುವ ಬೆನ್ನಲ್ಲೇ, ಲೋಕ ಸಭೆ ಚುನಾವಣೆಗೆ ಭರದ ತಯಾರಿ ನಡೆ ಸಿರುವ ಕಾಂಗ್ರೆಸ್‌, ಸರಕಾರ ಹಾಗೂ ಪಕ್ಷದಲ್ಲಿನ ನಾಯಕರ ನಡುವಿನ ಗೊಂದಲ ನಿವಾರಣೆಗೆ ಪಕ್ಷದೊಳಗೆ ಸಮನ್ವಯ ಸಮಿತಿ ರಚನೆ ಮಾಡಿದ್ದು, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಮಿತಿಯ ನೇತೃತ್ವ ವಹಿಸಲಾಗಿದೆ. 

Advertisement

ಲೋಕಸಭೆ ಚುನಾವಣೆಗೆ ಈಗಿನಿಂದಲೇ ವ್ಯವಸ್ಥಿತ ವಾಗಿ ಸಿದ್ದತೆ ನಡೆಸಿರುವ ಕಾಂಗ್ರೆಸ್‌ ವಿವಿಧ ಸಮಿತಿಗಳನ್ನೂ ರಚನೆ ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನಾ) ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಆದೇಶ ಹೊರಡಿಸಿದ್ದಾರೆ. 

ಇಪ್ಪತ್ತೆಂಟು ಮಂದಿ ಈ ಸಮನ್ವಯ ಸಮಿತಿಯಲ್ಲಿ ಇರಲಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌, ಕೆಪಿಸಿಸಿ ಕಾರ್ಯಾ ಧ್ಯಕ್ಷ ಈಶ್ವರ್‌ ಖಂಡ್ರೆ, ಸಚಿವರಾದ ಡಿ.ಕೆ.ಶಿವ ಕುಮಾರ್‌, ಎಂ.ಬಿ. ಪಾಟೀಲ್‌, ಕೆ.ಜೆ. ಜಾರ್ಜ್‌, ವಿ.ಎಸ್‌. ಉಗ್ರಪ್ಪ, ಮಾಜಿ ಸಚಿವ ರಾದ ಕಾಗೋಡು ತಿಮ್ಮಪ್ಪ, ಟಿ.ಬಿ. ಜಯ ಚಂದ್ರ, ವಿ. ಮುನಿಯಪ್ಪ, ರಮಾನಾಥ ರೈ, ಚಲುವರಾಯಸ್ವಾಮಿ, ರೋಶನ್‌ ಬೇಗ್‌, ಎಚ್‌. ಆಂಜನೇಯ, ಮೋಟಮ್ಮ, ಸಿ.ಎಂ. ಇಬ್ರಾಹಿಂ, ಪಿ.ಎಂ. ನರೇಂದ್ರ ಸ್ವಾಮಿ, ವಿನಯಕುಮಾರ್‌ ಸೊರಕೆ, ತನ್ವೀರ್‌ ಸೇs…, ಡಾ| ಶರಣ ಪ್ರಕಾಶ್‌ ಪಾಟೀಲ್‌, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ, ರಾಜ್ಯಸಭಾ ಸದಸ್ಯ ಎಂ.ವಿ. ರಾಜೀವ್‌ ಗೌಡ, ಶಾಸಕಿ ಅಂಜಲಿ ನಿಂಬಾಳ್ಕರ್‌, ಬಲ್ಕಿàಸ್‌ ಭಾನು, ಮಂಜುಳಾ ನಾಯ್ಡು ಸಮಿತಿ ಸದಸ್ಯರಾಗಿದ್ದಾರೆ. 

ಪ್ರದೇಶ ಚುನಾವಣ ಸಮಿತಿ
ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ಪ್ರದೇಶ ಚುನಾವಣ ಸಮಿತಿ ರಚಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ| ಜಿ. ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌, ಸತೀಶ್‌ ಜಾರಕಿಹೊಳಿ, ದೇಶಪಾಂಡೆ, ಈಶ್ವರ್‌ ಖಂಡ್ರೆ, ಎಚ್‌.ಕೆ. ಪಾಟೀಲ್‌, ವೀರಪ್ಪ ಮೊಲಿ, ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌, ಆಸ್ಕರ್‌ ಫೆರ್ನಾಂಡಿಸ್‌, ರೆಹಮಾನ್‌ ಖಾನ್‌, ಅಮರೇಗೌಡ ಬಯ್ನಾಪುರ್‌, ಶಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ, ಬಿ.ಎಲ್‌. ಶಂಕರ್‌, ಬೋಸರಾಜು, ಸಲೀಂ ಅಹಮದ್‌, ಉಮಾಶ್ರೀ, ಜಲಜಾ ನಾಯ್ಕ ಸದಸ್ಯರಾಗಿದ್ದಾರೆ. 

ಗುಂಪುಗಾರಿಕೆ ತಡೆಗೆ ತಂತ್ರ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ನಾಯಕರ ನಡುವೆ ಗುಂಪುಗಾರಿಕೆ, ಪ್ರತಿಷ್ಠೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌ ಹೈ ಕಮಾಂಡ್‌ ಈ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ. 7 ಬಾರಿ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟದಿಂದ ಹೊರಗಿಟ್ಟಿದ್ದರಿಂದ ಅವರೂ ಪಕ್ಷದ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಅವರನ್ನು ಸಮಾಧಾನಪಡಿಸಲು ಈ ಜವಾಬ್ದಾರಿ ವಹಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next