Advertisement

ರಸ್ತೆ ವಿಸ್ತರಣೆಗೆ ಭೂ ಮಾಲೀಕರ ಸಹಕಾರ ಅಗತ್ಯ

01:20 PM Dec 11, 2022 | Team Udayavani |

ಮಾಗಡಿ: ಪಟ್ಟಣದಲ್ಲಿ ಕೈಗೊಂಡಿರುವ ಕೆಸಿಎಫ್ ರಸ್ತೆ ವಿಸ್ತರಣೆಗೆ ಭೂಮಾಲೀಕರು ಸಹಕಾರ ನೀಡಿ ಹೃದಯ ಶ್ರೀಮಂತಿಕೆ ಮೆರೆಯಬೇಕಿದೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಕೆಸಿಫ್ ಅಧಿಕಾರಿಗಳ ಹಾಗೂ ಭೂಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭೂಮಾಲೀಕರು ಸಹಕಾರ ಕೊಟ್ಟರೆ ಕೆಸಿಫ್ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿಲು ಬದ್ಧನಾಗಿದ್ಧೇನೆ. ನೀವೆಲ್ಲ ಬೇಡ ಎಂದರೆ ನನ್ನ ತಕರಾರು ಏನೂ ಇಲ್ಲ. ಕೆಸಿಫ್ ಅಧಿಕಾರಿಗಳು ಜಂಟಿ ಮೆಸರ್‌ವೆುಂಟ್‌ ಸರ್ವೆ(ಜೆಎಂಸಿ)ಮಾಡಿ ವಿಸ್ತರಣೆಯ ಗೊಂದಲ ಸರಿಪಡಿಸಲಿದ್ದಾರೆ. ಇದು 15ರಡಿ ಪ್ರಾಥಮಿಕ ಅಧಿಸೂಚನೆಯಾಗಿದ್ದು, ಇದೇ ಅಂತಿಮವಲ್ಲ, ಜೆಎಂಸಿ ನಂತರ ಅಂತಿಮವಾಗಿ 19 ರಡಿ ಅಧಿಸೂಚನೆ ಹೊರಡಿಸಲಾಗುತ್ತದೆ. ಭೂಮಿ ಕಳೆದುಕೊಳ್ಳುವವರು ತಮ್ಮ ಭೂಸ್ವಾಧೀನಕ್ಕೆ ಸಿಗುವ ಪರಿಹಾರ ಕಡಿಮೆಯಾಗಿದ್ದರೆ, ನಾನೂ ಕಾನೂನು ಬದ್ಧವಾಗಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಪುರನಾಗರಿಕರನ್ನು ಗಣನೆಗೆ: ಪುರನಾಗರಿಕರನ್ನು ಗಣನೆಗೆ ತೆಗೆದುಕೊಂಡು ಕೆಸಿಫ್ ರಸ್ತೆ ಕಾಮಗಾರಿ ಕೈಗೊಳ್ಳುವ ಮೂಲಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಪುರನಾಗರಿಕರ ಭಾವನೆಯ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ, ಸುಮಾರು 50 ವರ್ಷದ ದೂರದೃಷ್ಟಿಯಿಂದ ಡಿಪಿಆರ್‌ ತಯಾರಾಗಿದೆ. ಸಾಧಕ-ಬಾಧಕ ನೋಡಿಕೊಂಡು ಪುರೋಭಿವೃದ್ಧಿಯೇ ನನ್ನ ಧ್ಯೇಯವಾಗಿದೆ. ಎಲ್ಲರೂ ಸಂಪೂರ್ಣ ಸಹಕಾರ ನೀಡಿ ಅಭಿವೃದ್ಧಿಗೆ ಕೈಜೋಡಿಸುವಂತೆ ಪುರನಾಗರಿಕರಿಗೆ ಮನವಿ ಮಾಡಿದರು.

ಸೂಕ್ತ ಪರಿಹಾರ ನಿಗದಿಪಡಿಸಿ: ಈ ಸಂಬಂಧ ಪುರನಾಗರಿಕರು ಒಕ್ಕರಲಿನಿಂದ ಒಪ್ಪಿಗೆ ಸೂಚಿಸಿದ್ದು, ಕೆಸಿಫ್ ಅಧಿಕಾರಿಗಳು ಜೆಎಂಸಿ ಮಾಡಿಸುವುದರಿಂದ ಯಾರ್ಯಾರು ಭೂಮಿ ಎಷ್ಟೆಷ್ಟು ರಸ್ತೆ ಅಗಲೀಕರಣ ಹೋಗುತ್ತದೆ ಎಂಬ ಚಿತ್ರಣ ಸಿಗುತ್ತದೆ. ಎಷ್ಟು ಭೂಮಿ ಉಳಿಸಿ ರಸ್ತೆ ಮಾಡಬಹುದು ಎಂಬ ಲೆಕ್ಕಚಾರವೂ ಸಿಗುತ್ತದೆ. ಜೆಎಂಸಿ ನಂತರ ಮತ್ತೂಂದು ಸಭೆ ಕರೆದು ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರ ನಿಗದಿಪಡಿಸಿ ಅಂತಿಮ ಗೊಳಿಸಲಾಗುವುದು. ಅಂಗಡಿ ಮಳಿಗೆ ಕಟ್ಟಿಕೊಳ್ಳುವವರು. ಹೈಟೆಕ್‌ ಕಾಂಫ್ಲೆಕ್ಸ್‌ ಕಟ್ಟಿಸಿ ಪಟ್ಣದ ಸೌಂದರ್ಯವನ್ನು ಹೆಚ್ಚಿಸುವಂತೆ ಶಾಸಕರು ಅಂಗಡಿ ಮಾಲೀಕರಿಗೆ ಸಲಹೆ ನೀಡಿದರು.

ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ: ಗಣಪತಿ ದೇವಸ್ಥಾನದ ಟ್ರಸ್ಟಿ ಸತೀಶ್‌ ಮಾತನಾಡಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಒಪ್ಪಿಗೆ ಪಡೆದು ರಸ್ತೆ ಅಗಲೀಕರಣ ಮಾಡುವ ಅವಕಾಶವಿದೆ. ಪಟ್ಟಣದ ಎಲ್ಲರನ್ನು ಗಣನೆಗೆ ತೆಗೆದುಕೊಂಡು ರಸ್ತೆ ಅಗಲೀಕರಣವಾಗಲಿ. ರಸ್ತೆ ಮಧ್ಯ ಭಾಗದಿಂದ ಎರಡು ಬದಿಗೆ ಸಮನಾಗಿ ಸರ್ವೆ ಮಾಡಿಸಿ ರಸ್ತೆ ಅಗಲೀಕರಣ ಮಾಡಿಸಿ ತಾರತಮ್ಯ ಮಾಡಬೇಡಿ. ಏನೇ ರಸ್ತೆ ಅಗಲೀಕರಣವಾದರೂ ಪುರಪಿತೃಗಳ ಆಶಯದಂತೆ ಕಲ್ಯಾಗೇಟ್‌ ಗಣಪತಿ ದೇವಸ್ಥಾನ ಯಥಾಸ್ಥಿತಿ ಉಳಿಸಿ ಪುರನಾಗರಿಕರಿಗೆ ಧಾರ್ಮಿಕ ಕಾರ್ಯಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

Advertisement

ಕದಂಬ ಗಂಗರಾಜು ಮಾತನಾಡಿ, ಶಾಸಕ ಎ.ಮಂಜುನಾಥ್‌ ಅವರ ವೈಯಕ್ತಿಕ ಹಿತಾಸಕ್ತಿಯಿಲ್ಲ, ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ ಸಲ್ಲಿಸಿದ ಅವರು, ಪುರೋಭಿವೃದ್ಧಿಯ ಹಿತಾದೃಷ್ಟಿಯಿಂದ ಕೆಸಿಫ್ ರಸ್ತೆ ಕೈಗೊಂಡಿದ್ದಾರೆ. ಎಲ್ಲರೂ ಸಹಕರಿಸೋಣ ಎಂದರು.

ಜನರ ಭಾವನೆಗೆ ಸ್ಪಂದಿಸಬೇಕು: ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್‌.ಜಿ.ರಮೇಶ್‌ ಗುಪ್ತಾ ಮತನಾಡಿ, ಶಾಸಕರು ಪುರನಾಗರಿಕರ ಭಾವನೆ ಸ್ಪಂದಿಸಬೇಕಿದೆ.ಪಟ್ಟಣದಲ್ಲಿ ನಾಲ್ಕು ಪಥದ ರಸ್ತೆ ಅನಾವಶ್ಯಕ ಎಂದರು.

ಸಂದೀಪ್‌, ಕೆ.ವಿ. ಬಾಲರಘು, ಎಂ.ಎನ್‌. ಮಂಜುನಾಥ್‌ ಮಾತನಾಡಿ, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಜನರ ಭಾವನೆಗೆ ಸ್ಪಂದಿಸಬೇಕು. ಎಷ್ಟು ವಿಸ್ತೀರ್ಣ ಕಡಿಮೆ ಮಾಡಬಹುದು ಅಷ್ಟನ್ನು ಕಡಿಮೆ ಮಾಡಿಸಿ ಅಂಗಡಿ ಮಾಲೀಕರನ್ನು ಉಳಿಸಿ,ನಾವೂ ಕೂಡ ರಸ್ತೆ ಅಗಲೀಕರಣಕ್ಕೆ ಕೈಜೋಡಿಸುತ್ತೇವೆ ಎಂದು ಸಲಹೆ ನೀಡಿದರು. ಆನಂದ್‌, ಸಂದೀಪ್‌, ಮೋಹನ್‌ ,ಮೂರ್ತಿ, ಎಸ್‌.ನಾಗರಾಜಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಮು, ಭರತ್‌, ಎಂ.ಆರ್‌. ರಾಘವೇಂದ್ರ, ಕುಮಾರ್‌ ಎನ್‌.ಎನ್‌.ನಟರಾಜ್‌, ಮೂರ್ತಿ, ಶಿವಕುಮಾರ್‌, ಜಯರಾಮ್‌, ಪ್ರಭಾಕರ್‌, ದಿವಾಕರ್‌, ಶಿವರಾಜು ವೆಂಕಟೇಶ್‌, ಕೆಸಿಫ್ ಮುಖ್ಯ ಎಂಜಿನಿಯರ್‌ ವಿವೇಕ್‌, ಎಂಜಿನಿಯರ್‌ ಎಇಇ ಗುರುರಾಜ್‌, ಕುಮಾರ್‌ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ: ಪಟ್ಟಣದ ಕಲ್ಯಾಗೇಟ್‌ ವೃತ್ತದಲ್ಲಿರುವ ಗಣಪತಿ ದೇವಸ್ಥಾನವನ್ನು ಒಟ್ಟಾರೆ ಎಲ್ಲರ ಅಭಿಪ್ರಾಯದಂತೆ ಅಲ್ಲೇ ಉಳಿಸುತ್ತೇವೆ. ವೃತ್ತದಲ್ಲಿಯೇ ಸ್ಥಾಪಿಸಲಾಗುವುದು. ಹೊಸಪೇಟೆ ವೃತ್ತದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ತೆರುವುಗೊಳಿಸಿ ಹಿಂಭಾಗದಲ್ಲಿ ಸ್ಥಳ ಗುರುತಿಸಿ ಸ್ಥಾಪಿಸಲಾಗುವುದು. ಹೊಸಪೇಟೆ, ಹೊಂಬಾಳಮ್ಮನಕೆರೆ ಏರಿ ಬಳಿ ಮತ್ತು ಕಲ್ಯಾಗೇಟ್‌ ವೃತ್ತ ಹಾಗೂ ಸೋಮೇಶ್ವರಸ್ವಾಮಿ ವೃತ್ತಗಳಲ್ಲಿ ಜೆಂಕ್ಷನ್‌ ಮಾಡಲಾಗುವುದು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುತ್ತದೆ. ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ ಆಗುತ್ತದೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next