Advertisement

ರಾಮಮಂದಿರ ನಿರ್ಮಾಣಕ್ಕೆ ಸಹಕಾರ: ಮಂತ್ರಾಲಯ ಶ್ರೀ

06:55 AM Dec 06, 2018 | Team Udayavani |

ಗಂಗಾವತಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂತ್ರಾಲಯ ಮಠ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಮಂತ್ರಾಲಯ ಮಠದ ಪೀಠಾಧ್ಯಕ್ಷ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

Advertisement

ತಾಲೂಕಿನ ಆನೆಗೊಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭು ಶ್ರೀರಾಮ, ಭಾರತೀಯರ ಆದರ್ಶ ಪುರುಷ. ಮಂದಿರ ನಿರ್ಮಾಣವನ್ನು ಸಕಲ ಭಾರತೀಯರು ಧರ್ಮಾತೀತವಾಗಿ ಬೆಂಬಲಿಸುವ ಮೂಲಕ ವಿಶ್ವಕ್ಕೆ ಸೂಕ್ತ ಸಂದೇಶ ಸಾರಬೇಕಿದೆ. ಮಂದಿರ ನಿರ್ಮಾಣ ವಿಷಯದಲ್ಲಿ ಐಕ್ಯತೆ ಪ್ರದರ್ಶನ ಮಾಡುವ ಮೂಲಕ ಸಂಸ್ಕೃತಿ ಉಳಿಸಬೇಕಿದೆ ಎಂದರು.

ಪದ್ಮನಾಭ ತೀರ್ಥರ ಆರಾಧನೆ: ಈ ಮಧ್ಯೆ, ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ ಮಂತ್ರಾಲಯ ಪೀಠಾಧ್ಯಕ್ಷ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ಬುಧವಾರ ಆರಂಭವಾಯಿತು. ಪೂರ್ವಾರಾಧನೆ ನಿಮಿತ್ತ ಪದ್ಮನಾಭ ತೀರ್ಥರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಬೆಳ್ಳಿ ಮತ್ತು ಚಿನ್ನದ ನಾಣ್ಯಗಳಿಂದ ಅಭಿಷೇಕ, ಬೆಳ್ಳಿ ಕವಚ ಹಾಗೂ ವಿವಿಧ ಪುಷ್ಪಾಲಂಕಾರ ಮಾಡಿ ಆರತಿ ಮಾಡಲಾಯಿತು. ಇದಕ್ಕೂ ಮುನ್ನ ಮಂತ್ರಾಲಯ ಶ್ರೀಗಳು ಮೂಲ ರಾಮದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ಈ ವೇಳೆ, ಮಾತನಾಡಿದ ಸುಭುದೇಂದ್ರ ತೀರ್ಥರು, ಉಭಯ ಮಠಗಳು ಕೂಡಿ ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ ಮಾಡುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next