Advertisement

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

11:29 AM Oct 08, 2024 | Team Udayavani |

ಆನೇಕಲ್‌: ಬೆಂಗಳೂರು ಹೊರ ವಲಯದ ಜಿಗಣಿ ಹಾಗೂ ಪೀನ್ಯದಲ್ಲಿ ಪಾಕಿಸ್ತಾನ ಪ್ರಜೆಗಳ ಬಂಧನದ ಬೆನ್ನಲ್ಲೇ ಆರೋ ಪಿಗಳಿಗೆ ಸಹಕಾರ ನೀಡುತ್ತಿದ್ದ ಪ್ರಮುಖ ಆರೋಪಿಯನ್ನು ಜಿಗಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಉತ್ತರ ಪ್ರದೇಶದ ಆರೋಪಿ ಫ‌ರ್ವೇಜ್‌ನನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಜಿಗಣಿ ಸಮೀಪದ ರಾಜಪುರದಲ್ಲಿ ಪಾಕಿ ಸ್ತಾನಿ ಪ್ರಜೆ ರಶೀದ್‌ ಅಲಿ ಸಿದ್ದಕಿ ಬಂಧನದ ಬಳಿಕ ಬೆಂಗಳೂರಿನ ಪೀಣ್ಯದಲ್ಲಿ ಪತಿ-ಪತ್ನಿ ಹಾಗೂ ಮಗಳನ್ನು ಜಿಗಣಿ ಪೊಲೀ ಸರು ವಶಕ್ಕೆ ಪಡೆದಿದ್ದರು. ತನಿಖೆ ಸಂದರ್ಭದಲ್ಲಿ ಪಾಕಿಸ್ತಾನ ದಿಂದ ಬಂದ ಪ್ರಜೆಗಳಿಗೆ ಮೆಹದಿ ಫೌಂಡೇಷನ್‌ ಧರ್ಮ ಗುರು ಯೂನಸ್‌ ಅಲ್ಗೋರ್‌ ಮೂಲಕ ಪಾಕಿಸ್ತಾನದಿಂದ ಬಂದ ಪ್ರಜೆಗಳಿಗೆ ಹಣದ ಸಹಕಾರ ಈತನೇ ನೀಡುತ್ತಿದ್ದ ಎಂಬ ಮಾಹಿತಿ ಗೊತ್ತಾಗಿತ್ತು.

ಪಾಕಿಸ್ತಾನದ ಪ್ರಜೆಗಳಿಗೆ ಈತನೇ ನಕಲಿ ದಾಖಲೆ ಹಾಗೂ ಆಧಾರ್‌ ಕಾರ್ಡ್‌ ಸೇರಿದಂತೆ ಪಾನ್ಪೋರ್ಟ್‌ ಪ್ರತಿಯೊಂದು ಮಾಡಿಸಿಕೊಟ್ಟಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿತ್ತು. ಆರೋಪಿಗೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ 10 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next