Advertisement

ಪಕ್ಷ ಸಂಘಟನೆಗೆ ನಿರಂತರ ರಾಜ್ಯ ಪ್ರವಾಸ: ಎಚ್‌ಡಿಡಿ

07:10 AM Sep 07, 2017 | |

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಬಲಿಷ್ಠವಾಗಿ ಸಂಘಟಿಸಲು ತಾವು ಮತ್ತು ಕುಮಾರಸ್ವಾಮಿ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊ ಳ್ಳಲಿದ್ದೇವೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು,ಎರಡು ತಂಡಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಹಾಗೂ ಕೇಂದ್ರ
ಮತ್ತು ರಾಜ್ಯ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಜನ ಜಾಗೃತಿ ಮೂಡಿಸಲಿದ್ದೇವೆ. ಬೂತ್‌ ಕಮಿಟಿ ರಚನೆ, ತಾಲೂಕು ಘಟಕ ರಚನೆ ಕಾರ್ಯ ನಡೆದಿದೆ.

ಸಂಘಟನೆ ಹಿಂದೆ ಬಿದ್ದಿರುವ ಕಡೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಧಿಕಾರಕ್ಕೆ ಬರಲು ಕೇವಲ ಕುಮಾರಸ್ವಾಮಿ  ಅವರ ಜನಪ್ರಿಯತೆ ಒಂದೇ ಸಾಲದು ಕಾರ್ಯಕರ್ತರು ಶ್ರಮ ಹಾಕಬೇಕು ಎಂದರು. ಕುಮಾರಸ್ವಾಮಿ ಇಸ್ರೇಲ್‌ ಭೇಟಿ ನೀಡಿದ್ದು ರೈತನ ಮಗನಾಗಿ, ಅಧ್ಯಯನ ಪ್ರವಾಸ ವರದಿ ಸರ್ಕಾರಕ್ಕೆ ಸಲ್ಲಿಸುವಂತೆಯೂ ಸೂಚಿಸುತ್ತೇನೆ.ಸರ್ಕಾರ ನಮ್ಮ ರೈತರನ್ನು ಸಿಂಗಾಪುರ, ಚೀನಾ ಪ್ರವಾಸ ಕಳುಹಿಸುವ ಬದಲು ಇಸ್ರೇಲ್‌ಗೆ ಕಳುಹಿಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next