Advertisement

ರಾಜ್ಯದಲ್ಲಿ ಮಳೆಗಾಗಿ ಮುಂದುವರಿದ ಪರ್ಜನ್ಯ

06:44 AM Jun 10, 2019 | Team Udayavani |

ಬೆಂಗಳೂರು: ಮಳೆಗಾಗಿ ಪ್ರಾರ್ಥಿಸಿ ರಾಜ್ಯದ ಕೆಲವೆಡೆ ದೇವರಿಗೆ ಪರ್ಜನ್ಯ, ಹವನ, ವಿಶೇಷ ಪೂಜೆಗಳು ಮುಂದುವರಿದಿವೆ. ಗೋಕರ್ಣದ ಇಂದ್ರೇಶ್ವರನಿಗೆ ಪರ್ಜನ್ಯ-ಹವನಾದಿಗಳು ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಹೊರ ಪ್ರಾಧಿಕಾರದಲ್ಲಿರುವ ಇಂದ್ರೇಶ್ವರ ಲಿಂಗಕ್ಕೆ ಜಲಾಭಿಷೇಕ, ಪರ್ಜನ್ಯ-ಹವನಾದಿಗಳು ದೇವಾಲಯದ ಮುಖ್ಯ ಅರ್ಚಕ ವೇ.ಮೂ.ಶಿತಿಕಂಠ ಹಿರೇ ನೇತೃತ್ವದಲ್ಲಿ ನಡೆಯಿತು.

ರಿಪ್ಪನ್‌ಪೇಟೆಯ ಪುರಾಣ ಪ್ರಸಿದ್ಧ ಶ್ರೀ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ 108 ಎಳನೀರಿನ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು.

ಬಾಗಲಕೋಟೆಯ ಮುರನಾಳ ಪುನರ್ವಸತಿ ಕೇಂದ್ರದಲ್ಲಿ ಮಳೆಗೆ ಪ್ರಾರ್ಥಿಸಿ ಗ್ರಾಮ ದೇವಿಗೆ ವಿಶೇಷ ಅಭಿಷೇಕ, ಎಲಿಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ, ತವರು ಮನೆಯಿಂದ ಬಂದ ಸಿರಿ ಗಳಿಗೆಯನ್ನು ದೇವಿಗೆ ಉಡಿಸಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ರಾಜ್ಯದ ಇತರೆಡೆಯೂ ಮಳೆಗೆ ಪ್ರಾರ್ಥಿಸಿ, ವಿಶೇಷ ಪೂಜೆಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next