Advertisement

Bangladesh: ಹಸೀನಾ ಪರಾರಿಯಾದ್ರೂ ನಿಲ್ಲದ ಹಿಂಸಾಚಾರ!; ಮುಂದುವರಿದ ಪ್ರತಿಭಟನೆ

11:47 PM Aug 06, 2024 | Team Udayavani |

ಢಾಕಾ: ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗಿದ್ದರೂ ಢಾಕಾದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ. ದುಷ್ಕರ್ಮಿಗಳ ಅಟ್ಟಹಾಸ ಮಂಗಳವಾರವೂ ಮುಂದುವರಿ ದಿದ್ದು, ಹಸೀನಾ ರಾಜೀನಾಮೆ ಬಳಿಕ ನಡೆದ ಹಿಂಸಾಚಾರದಲ್ಲೇ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಆಘಾತಕಾರಿ ಘಟನೆ ಎಂಬಂತೆ, ಅವಾಮಿ ಲೀಗ್‌(ಹಸೀನಾರ ಪಕ್ಷ)ನ ನಾಯಕರೊಬ್ಬರಿಗೆ ಸೇರಿದ ಹೊಟೇಲ್‌ಗೆ ಪ್ರತಿಭಟನಾಕಾರರ ಗುಂಪೊಂದು ಸೋಮವಾರ ರಾತ್ರಿ ಬೆಂಕಿ ಹಚ್ಚಿದ್ದು, ಹೊಟೇಲ್‌ನೊಳಗಿದ್ದ 25 ಮಂದಿ ಸಜೀವ ದಹನವಾಗಿದ್ದಾರೆ!

Advertisement

ಢಾಕಾದಲ್ಲಿರುವ ಝಬೀರ್‌ ಇಂಟರ್‌ನ್ಯಾಶನಲ್‌ ಹೊಟೇಲ್‌ನಲ್ಲಿ ಈ ಕೃತ್ಯ ನಡೆದಿದೆ. ಏಕಾಏಕಿ ನುಗ್ಗಿದ ಗುಂಪು ಹೊಟೇಲ್‌ನ ನೆಲಮಹಡಿಗೆ ಬೆಂಕಿ ಹಚ್ಚಿದ್ದು, ಕ್ಷಣ ಮಾತ್ರದಲ್ಲಿ ಅದು ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಅಲ್ಲಿದ್ದ ಸುಮಾರು 24 ಮಂದಿ ಅತಿಥಿಗಳು, ಸಿಬ್ಬಂದಿ ಸುಟ್ಟು ಕರಕಲಾಗಿದ್ದಾರೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ.

ಪೊಲೀಸರಿಂದಲೇ ಮುಷ್ಕರ!: ಈಗ ಬಾಂಗ್ಲಾದಲ್ಲಿ ಪೊಲೀಸರೇ ಮುಷ್ಕರ ಆರಂಭಿಸಿದ್ದಾರೆ. “ಪ್ರತಿ ಪೊಲೀಸ್‌ ಸಿಬ್ಬಂದಿಗೂ ರಕ್ಷಣೆ ನೀಡುವುದಾಗಿ ಭರವಸೆ ಕೊಡುವವರೆಗೂ ಮುಷ್ಕರ ಮುಂದುವರಿಸುತ್ತೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಪರಾರಿಯಾಗುತ್ತಿದ್ದ ಸಚಿವರಿಬ್ಬರ ಸೆರೆ!

ಭಾರತಕ್ಕೆ ಪರಾರಿಯಾಗಲು ಯತ್ನಿಸಿದ ಬಾಂಗ್ಲಾದ ಇಬ್ಬರು ಸಚಿವರನ್ನು ಮಂಗಳವಾರ ಬಾಂಗ್ಲಾ ಸೇನೆ ಬಂಧಿಸಿದೆ. ಹಸೀನಾ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಹಸನ್‌ ಮಹೂ¾ದ್‌, ಐಟಿ ಸಚಿವರಾಗಿದ್ದ ಜುನೈದ್‌ ಅಹ್ಮದ್‌ ಪಲಕ್‌ ಅವರು ದಿಲ್ಲಿಗೆ ಪರಾರಿಯಾಗಲೆಂದು ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲೇ ಅವರನ್ನು ಬಂಧಿಸಲಾಗಿದೆ.

Advertisement

ದಂಗೆ ಮಧ್ಯೆ 500 ಕೈದಿಗಳು ಪರಾರಿ

ದೇಶದಲ್ಲಿ ಸೃಷ್ಟಿಯಾಗಿರುವ ಅರಾಜ ಕತೆಯ ಲಾಭವನ್ನು ಬಾಂಗ್ಲಾದ ಕೈದಿಗಳೂ ಪಡೆದಿದ್ದಾರೆ. ಸೋಮ ವಾರ ಗುಂಪೊಂದು ಶೇರ್‌ಪುರ ಜಿಲ್ಲಾ ಕಾರಾಗೃಹದ ಗೇಟು ಮುರಿದು ಒಳನುಗ್ಗಿದ್ದಲ್ಲದೆ, ಕಟ್ಟಡಕ್ಕೆ ಬೆಂಕಿಯನ್ನೂ ಹಚ್ಚಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ಸುಮಾರು 500 ಕೈದಿಗಳು ಜೈಲಿಂದ ಪರಾರಿಯಾಗಿದ್ದಾರೆ.

ಒಟ್ಟಾರೆ ಸಾವಿನ ಸಂಖ್ಯೆ 440ಕ್ಕೇರಿಕೆ

ಶೇಖ್‌ ಹಸೀನಾ ಪರಾರಿಯಾದ ಬಳಿಕ ನಡೆದ ದೊಂಬಿಯಲ್ಲಿ 100 ಮಂದಿ ಮೃತಪಟ್ಟಿದ್ದು, ಈ ಮೂಲಕ ಬಾಂಗ್ಲಾದಲ್ಲಿ ಮೀಸಲು ವಿರೋಧಿ ಹಿಂಸಾಚಾರಕ್ಕೆ ಜುಲೈ ಯಿಂದ ಈವರೆಗೆ ಬಲಿಯಾದವರ ಸಂಖ್ಯೆ 440ಕ್ಕೇರಿದೆ. ಗಲಭೆ ಪೀಡಿತ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ದುಷ್ಕರ್ಮಿಗಳು ಸಿಕ್ಕ ಸಿಕ್ಕ ಮನೆಗಳು, ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ, ಸರಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುತ್ತಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಬಾಂಗ್ಲಾ ಸೇನೆ ಹರಸಾಹಸ ಪಡುತ್ತಿದೆ. ಮಂಗಳವಾರ ಕೆಲವು ಪ್ರದೇಶಗಳಲ್ಲಿ ಮಾತ್ರ ಪರಿಸ್ಥಿತಿ ಸಹಜತೆಗೆ ಮರಳಿದೆ ಎಂದು ವರದಿಗಳು ಹೇಳಿವೆ.

ರಾಜೀನಾಮೆ ನೀಡಲು  ಕೊನೆ ಕ್ಷಣದಲ್ಲಿ ಹಸೀನಾ ಮನವೊಲಿಸಿದ್ದ ಕುಟುಂಬ

ರಾಜೀನಾಮೆ ನೀಡಲು ನಿರಾಕರಿಸಿದ್ದ ಪ್ರಧಾನಿ ಹಸೀನಾ, ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಸೇನೆ ತನ್ನ ಶಕ್ತಿಯನ್ನು ಬಳಸಿ ಹತ್ತಿಕ್ಕಬೇಕು ಎಂದು ಸೂಚಿಸಿದ್ದರು ಎಂದು ವರದಿಗಳು ತಿಳಿಸಿವೆ. ಸೋಮವಾರ ಹಸೀನಾ ಅವರು ಸೇನೆಯ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಿದ್ದರು. ರಾಜೀನಾಮೆ ನೀಡಿ, ಅಧಿಕಾರವನ್ನು ಸೇನೆಗೆ ಹಸ್ತಾಂತರಿಸಲು ನಿರಾಕರಿಸಿದ್ದರು ಎಂದು ಬಾಂಗ್ಲಾ ಪತ್ರಿಕೆ “ಪ್ರೋಟಮ್‌ ಆಲೋ’ ಮೂಲಗಳನ್ನುಲ್ಲೇಖೀಸಿ ವರದಿ ಮಾಡಿದೆ. ಹಸೀನಾ ಅವರು ರಾಜೀನಾಮೆ ನೀಡಲು ಅವರ ಪುತ್ರ ಶಜೀಬ್‌ ಸಾಕಷ್ಟು ಬಾರಿ ಮನವೊಲಿಸಲು ಪ್ರಯತ್ನಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮನೆಗೆ ನುಗ್ಗ ಲಿದ್ದಾರೆ ಎಂದು ಗುಪ್ತಚರ ಮಾಹಿತಿ ಸಿಕ್ಕ ಬೆನ್ನಲ್ಲೇ ಹಸೀನಾ ಅವರು ದೇಶ ತೊರೆಯುವ ನಿರ್ಧಾರ ಕೈಗೊಂಡರು ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next