Advertisement

ಮುಂದುವರಿದ ಕೋವಿಡ್‌ 19 ಜಾಗೃತಿ

06:18 AM Jun 13, 2020 | Lakshmi GovindaRaj |

ದೇವನಹಳ್ಳಿ: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದೆ. ಅದರ ಪರಿಣಾಮ ಸರ್ಕಾರ, ತಜ್ಞರ ಸಲಹೆ ಮೇರೆಗೆ ಸ್ವಯಂ ವೈದ್ಯಕೀಯ ಪರೀಕ್ಷೆಗೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕೋವಿಡ್‌-19 ಸ್ವಯಂ ವೈದ್ಯಕೀಯ ತಪಾಸಣೆ  ಆರಂಭಿಸಿರುವುದರಿಂದ ನಗರದ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡವು.

Advertisement

ಜಿಲ್ಲೆಯಲ್ಲಿ ಈವರೆಗೆ ಹೊರಗಿನಿಂದ ಬಂದವರಿಗೆ ಸೋಂಕು ಲಕ್ಷಣ ಕಂಡರೂ, ಅವರ ಸಂಪರ್ಕಿತರಿಗೆ  ನಡೆಸಿದ ಪರೀಕ್ಷೆಯಲ್ಲಿ ಸೋಂಕು ಕಂಡಿಲ್ಲ. ಸರ್ಕಾರದ ಆದೇಶದಂತೆ ಪ್ರತಿಯೊಂದು ಆ ಮಾರ್ಗಸೂಚಿ ಅನುಸರಿಸ ಲಾಗುತ್ತಿದೆ. 4 ಕೋವಿಡ್‌ ಪರೀಕ್ಷೆ ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ  ಪ್ರತಿದಿನ 60-70 ಸ್ವಯಂ ಪ್ರೇರಿತರು ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.

ಸೋಂಕು ತಡೆಗೆ ಸಾಮೂಹಿಕ ಸಹಭಾಗಿತ್ವದ ಅಡಿಯಲ್ಲಿ ಜಾಗೃತಿ ಮೂಡಿಸಿ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಸ್ವಯಂ  ಪ್ರೇರಿತರಾಗಿ ಪರೀಕ್ಷೆಗೆ ಬರುತ್ತಿರುವುದು ಸೋಂಕು ಕಡಿವಾಣಕ್ಕೆ ಮುನ್ಸೂಚನೆ ಎನ್ನುತ್ತಾರೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ. ಸ್ಯಾನಿಟೈಸರ್‌ ಬಳಸಿ, ಅಂತರ ಕಾಯ್ದು ನಿಂತವರು ವಿಳಾಸ ಕೇಳುತ್ತಿರುವ ಆರೋಗ್ಯ ಸಿಬ್ಬಂದಿ, ಆರೋಗ್ಯ ಸೇತು ಆ್ಯಪ್‌ ಕಡ್ಡಾಯವಾಗಿ  ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಎಲ್ಲಾ ಕುಟುಂಬ ಕಲ್ಯಾಣ ಯೋಜನಾ ಅಧಿಕಾರಿ ಡಾ. ಶ್ರೀನಿವಾಸ್‌ ಮಾತನಾಡಿ, 4 ತಾಲೂಕು  ಕೇಂದ್ರದಲ್ಲಿ 4 ಕೊವಿಡ್‌ -19 ಸ್ವಯಂ ತಪಾಸಣಾ ಕೇಂದ್ರ ಮಾರ್ಚ್‌ 14ರಂದು ಆರಂಭಿಸಲಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದರು ಮುಖ್ಯವಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗದರೆ  ಸೋಂಕಿನ ಕಡಿವಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next