Advertisement

ಬಸ್ರೂರು-ಬಳ್ಕೂರು ಉದ್ದಕ್ಕೂ ಹೊಸ ರಸ್ತೆ ಶೀಘ್ರ ನಿರ್ಮಾಣ

11:52 PM Jun 15, 2020 | Sriram |

ಬಸ್ರೂರು: ಶಾಸಕರ ಅನುದಾನ ಲಭ್ಯವಾದರೂ ಬಸ್ರೂರು-ಬಳ್ಕೂರು ರಸ್ತೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಗೊಂಡಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಂಚರಿಸಲು ಆಗ ದಷ್ಟು ಹೊಂಡಬಿದ್ದಿದೆ. ಬಸ್ರೂರು ಬಸ್‌ ನಿಲ್ದಾಣದ ಸಮೀಪ ಸಿಂಡಿಕೇಟ್‌ ಬ್ಯಾಂಕ್‌ ಎದುರು ಸಾಗುವ ಈ ರಸ್ತೆಯ ಮಧ್ಯೆ ಸುಮಾರು 600 ಮೀ. ಉದ್ದಕ್ಕೆ ಕಾಂಕ್ರೀಟ್‌ ಹಾಕಲಾಗಿತ್ತು. ಉಳಿದಂತೆ ರಸ್ತೆಯ ಹೊಂಡ, ಜಲ್ಲಿಕಲ್ಲುಗಳ ನಡುವೆ ಪಾದಚಾರಿಗಳಿಗೂ ಸಂಚಾರ ಅಸಾಧ್ಯವಾಗಿದೆ.

Advertisement

ಆದರೆ ಇದೀಗ ಗುತ್ತಿಗೆದಾರರು ಕಾಮಗಾರಿಗೆ ಮುಂದಾಗಿದ್ದು ಶೀಘ್ರ ನೂತನ ಡಾಮಾರು ರಸ್ತೆ ನಿರ್ಮಾಣ ವಾಗಲಿದೆ. ಹೊಂಡ-ಗುಂಡಿಗಳು ಹೆಚ್ಚಿಗೆ ಇದ್ದ ಕಡೆಗಳಲ್ಲಿ ಕಾಂಕ್ರಿಟ್‌ ಹಾಕ ಲಾಗುತ್ತದೆ. ಅಲ್ಲದೆ ಗುಲ್ವಾಡಿ ಕಳುವಿನ ಬಾಗಿಲಿನಿಂದ ಕಂಡ್ಲೂರು ಹಳೆ ಕಳುವಿನ ಬಾಗಿಲಿನ ತನಕ ಶಾಸಕರ ಅನುದಾನ 50 ಲಕ್ಷ ರೂ.ದಡಿ ಕಾಂಕ್ರೀಟ್‌ ರಸ್ತೆ ಸಹ ನಿರ್ಮಾಣವಾಗಲಿದೆ.

ಶೀಘ್ರ ಕಾಂಕ್ರೀಟ್‌ ರಸ್ತೆ
ಬಸ್ರೂರಿನಿಂದ ಬಳ್ಕೂರು ಕಳುವಿನ ಬಾಗಿಲಿನ ತನಕ ನೂತನ ಡಾಮಾರು ಮತ್ತು ಕಾಂಕ್ರೀಟ್‌ ರಸ್ತೆ ಶೀಘ್ರ ನಿರ್ಮಾಣವಾಗಲಿದೆ. ಈಗಾಗಲೇ ಗುತ್ತಿಗೆದಾರರು ಕಾಮಗಾರಿ ನಡೆಸಲು ಸಿದ್ಧರಾಗಿದ್ದಾರೆ. ಆದರೆ ಮಳೆ ಪ್ರಮಾಣ ಹೆಚ್ಚಾದರೆ ಮಳೆಗಾಲದ ಅನಂತರ ಈ ನೂತನ ರಸ್ತೆ ನಿರ್ಮಾಣವಾಲಿದೆ.
-ರಾಮ್‌ ಕಿಶನ್‌ ಹೆಗ್ಡೆ
ತಾ.ಪಂ. ಉಪಾಧ್ಯಕ್ಷ, ಬಸ್ರೂರು

Advertisement

Udayavani is now on Telegram. Click here to join our channel and stay updated with the latest news.

Next