Advertisement

ಮಳೆಹಾನಿ ಸಂತ್ರಸ್ತರಿಗೆ ರೋಟರಿಯಿಂದ 25 ಮನೆಗಳ ನಿರ್ಮಾಣ

12:30 AM Feb 16, 2019 | Team Udayavani |

ಮಡಿಕೇರಿ : ರೋಟರಿ ಅಂತರಾಷ್ಟ್ರೀಯ ಸಂಸ್ಥೆ ವತಿಯಿಂದ 25 ಮನೆಗಳ ನಿರ್ಮಾಣಕ್ಕೆ ಗುರುವಾರ ಇಗ್ಗೊಡ್ಲು ಗ್ರಾಮದಲ್ಲಿ ಭೂಮಿ ಪೂಜಾ ಕಾರ್ಯಕ್ಕೆ ಚಾಲನೆ ದೊರೆಯಿತು.  

Advertisement

ರೋಟರಿ ಸಂಸ್ಥೆಯ ಟಿ.ಭಾಸ್ಕರ,ಯೋಜನಾ ನಿರ್ದೇಶಕರಾದ ಡಾ| ರವಿ ಅಪ್ಪಾಜಿ ಮತ್ತು ರೋಟರಿ ಜಿಲ್ಲೆ ಗವರ್ನರ್‌ರೋಹಿನಾಥ್‌, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್‌, ಗ್ರಾ.ಪಂ. ಉಪಾಧ್ಯಕ್ಷರಾದ ಲತಾ ಮತ್ತಿತರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು. 
  
ಪ್ರಕೃತಿ ಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅವರವ ಸ್ವಂತ ಜಾಗದಲ್ಲಿ ಒಂದು ಮನೆಗೆ 5 ಲಕ್ಷ ರೂ. ನಂತೆ 25 ಮನೆಗಳನ್ನು ರೋಟರಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗುತ್ತದೆ. 25 ಮನೆಗಳಿಗೆ 1.26 ಕೋಟಿ ರೂ. ವೆಚ್ಚವಾಗಲಿದೆ ಎಂದು ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರಾದ ಟಿ.ಭಾಸ್ಕರ್‌ ಅವರು ತಿಳಿಸಿದರು.
     
ಸರಕಾರದ ಜತೆ ಸರಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ನಿರಾಶ್ರಿ ತರು ಎಂದಿನಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಯೋಜನಾ ಮುಖ್ಯ ಸ್ಥರಾದ ಡಾ| ರವಿ ಅಪ್ಪಾಜಿ ಅವರು ಮಾತನಾಡಿ ನಿರಾಶ್ರಿತರಿಗೆ ರೋಟರಿ ಹ್ಯಾಬಿಟೇಟ್‌ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಮೊದಲ ಹಂತದಲ್ಲಿ 25 ಮನೆ ನಿರ್ಮಿಸ ಲಾಗುತ್ತಿದೆ ಎಂದರು.  ಮಾಹಿತಿ ಮತ್ತು ನಿರ್ವಹಣೆಯ  ಹಿರಿಯ  ನಿರ್ದೇಶಕರು  ಸಂಜಯ್‌ ದಾಸ್ವಾನಿ ಅವರು ಮಾತನಾಡಿ ಕೊಡಗು ಪ್ರಕೃತಿ ಕೋಪದ ನಿರಾಶ್ರಿತರಿಗೆ ಆದಷ್ಟು ಬೇಗ ಮನೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು. 
  
ಆರ್‌.ಐ ಜಿಲ್ಲಾ 3181 ಗವರ್ನರ್‌ ಪಿ.ರೋನಾಥ್‌ ಅವರು ಮಾತನಾಡಿ ರೋಟರಿ ಹ್ಯಾಬಿಟೇಟ್‌ ಸಂಸ್ಥೆಯು ದೇಶದಲ್ಲಿ ಸುಮಾರು 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದೆ. ಇಗ್ಗೊàಡ್ಲು ಗ್ರಾಮದಲ್ಲಿ 25 ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಿಸುತ್ತದೆ. ಎನ್‌ಜಿಒಗಳು ಸಹಕಾರ ನೀಡಿದೆ ಎಂದು ತಿಳಿಸಿದರು. 

ಸೋಮವಾರಪೇಟೆ ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್‌,  ನಿರಾಶ್ರಿತರಾದ ಪಾಂಚಾಲಿ, ಶೋಭಾ, ಟಿ.ರಘು ಹಾಗೂ ಇತರ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಚೆಕ್‌ ತರಿಸಲಾಯಿತು. ರೋಟರಿ ಹ್ಯಾಬಿಟೇಟ್‌ ಸಂಸ್ಥೆ  ಕಾರ್ಯದರ್ಶಿ ಕೃಷ್ಣ ಶೆಟ್ಟಿ, ಮಾದಾಪುರ ಪಿಡಿಒ ಸಂತೋಷ್‌ ಕುಮಾರ್‌, ಸಾರ್ವಜನಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next