Advertisement

ಕೃಷಿ ಕಾಯ್ದೆ: ದೆಹಲಿ ಗಡಿಯಲ್ಲಿ ರೈತರ ಹೋರಾಟದ ಹಿಂದೆ ಚೀನಾ, ಪಾಕ್ ಕೈವಾಡ? ಕೇಂದ್ರ ಸಚಿವ

10:55 AM Dec 10, 2020 | Nagendra Trasi |

ಔರಂಗಾಬಾದ್:ದೆಹಲಿ ಗಡಿಯಲ್ಲಿ ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡ ಇರುವುದಾಗಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಆರೋಪಿಸಿದ್ದಾರೆ.

Advertisement

ಈ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)ಯ ಬಗ್ಗೆ ಮುಸ್ಲಿಮರು ಪ್ರತಿಭಟನೆ ನಡೆಸುವ ಮೂಲಕ ದೇಶದ ಜನರ ದಿಕ್ಕುತಪ್ಪಿಸಿದ್ದರು. ಆದರೆ ಆ ಹೋರಾಟ ಯಶಸ್ವಿಯಾಗಲಿಲ್ಲ. ಆದರೆ ಇದೀಗ ನೂತನ ಕಾಯ್ದೆಯಿಂದ ತಮಗೆ ನಷ್ಟವಾಗುತ್ತದೆ ಎಂದು ರೈತರು ಹೋರಾಟಕ್ಕಿಳಿದಿದ್ದಾರೆ ಎಂದು ದೂರಿದರು.

ಅವರು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಬದ್ನಾಪುರ್ ತಾಲೂಕಿನ ಕೋಲ್ಟೆ ಟಾಕ್ಲಿ ಎಂಬಲ್ಲಿ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡುತ್ತ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ದೇಶದ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ. ಮೊದಲು ದೇಶದ ಮುಸ್ಲಿಮರನ್ನು ಪ್ರಚೋದಿಸಲಾಗಿತ್ತು. ಆಗ ಏನು ಹೇಳಿದರು? ಎನ್ ಆರ್ ಸಿ ಬರುತ್ತಿದೆ, ಸಿಎಎ ಬರುತ್ತಿದೆ. ಇನ್ನು ಆರು ತಿಂಗಳಲ್ಲಿ ಮುಸ್ಲಿಮರು ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ಹಾಗಾದರೆ ಒಬ್ಬರೇ ಒಬ್ಬ ಮುಸ್ಲಿಮರು ದೇಶ ಬಿಡುವಂತಾಗಿದೆಯೇ? ಎಂದು ದಾನ್ವೆ ಪ್ರಶ್ನಿಸಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ:ಅತ್ತ ಕೆಜಿಎಫ್-2 ಫೈಟ್‌, ಇತ್ತ ಸಲಾರ್‌ ಆಡಿಷನ್‌! ಪ್ರಶಾಂತ್‌ ನೀಲ್‌ ಫ‌ುಲ್‌ ಬಿಝಿ

Advertisement

ರೈತರ ಪ್ರತಿಭಟನೆ ಹಿಂದೆ ಎರಡು ದೇಶಗಳ ಕೈವಾಡ ಇದೆ ಎಂಬ ಬಗ್ಗೆ ವಿಸ್ತ್ರತವಾಗಿ ಯಾವುದೇ ವಿವರಣೆಯನ್ನು ಸಚಿವ ದಾನ್ವೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಸರ್ಕಾರ ಗೋಧಿಯನ್ನು ಕಿಲೋಗೆ 24 ರೂ. ಹಾಗೂ ಅಕ್ಕಿಯನ್ನು ಕಿಲೋಗೆ 34ರೂಪಾಯಿಯಂತೆ ಖರೀದಿಸಿ. ಜನರಿಗೆ ಗೋಧಿಯನ್ನು 2 ರೂಪಾಯಿಗೆ, ಅಕ್ಕಿಯನ್ನು 3 ರೂಪಾಯಿಗೆ ನೀಡುತ್ತಿದೆ. ಕೇಂದ್ರ ಸರ್ಕಾರ ಇದಕ್ಕಾಗಿ 1.75 ಲಕ್ಷ ಕೋಟಿ ಸಬ್ಸಿಡಿ ನೀಡುತ್ತಿದೆ. ಸರ್ಕಾರ ರೈತರ ಹಿತಕ್ಕಾಗಿ ಹಣವನ್ನು ವ್ಯಯಿಸುತ್ತಿದೆ ಎಂದು ಸಚಿವ ದಾನ್ವೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಪ್ರಧಾನಿ ಹಾಗೂ ಅವರು ಯಾವತ್ತೂ ರೈತ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ದಾನ್ವೆ ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next