Advertisement

Kasaragod ಕಳಮಶ್ಶೇರಿ ಸ್ಫೋಟಕ್ಕೆ ದುಬಾೖಯಲ್ಲಿ ಸಂಚು

12:44 AM Nov 02, 2023 | Team Udayavani |

ಕಾಸರಗೋಡು: ಯಹೋವನ ಸಮಾವೇಶ ನಡೆಯುತ್ತಿದ್ದ ಕಳಮಶ್ಶೇರಿ ಯ ಕನ್ವೆನ್ಶನ್‌ ಹಾಲ್‌ನಲ್ಲಿ ತ್ರಿವಳಿ ಬಾಂಬ್‌ ಸ್ಫೋಟದ ಸಂಚನ್ನು ದುಬಾೖಯಲ್ಲಿ ರೂಪಿಸಲಾಗಿತ್ತೆಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಮಾಹಿತಿ ಲಭಿಸಿದೆ.

Advertisement

ಈ ಹಿನ್ನೆಲೆಯಲ್ಲಿ ತನಿಖೆಯನ್ನು ದುಬಾೖಗೆ ವಿಸ್ತರಿಸಲಾಗಿದೆ. ಕಳೆದ ರವಿವಾರ ಸರಣಿ ಬಾಂಬ್‌ ಸ್ಫೋಟ ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಚೆಲವನ್ನೂರು ವೇಲಿಕಗತ್ತ ವೀಟಿಲ್‌ನ ಮಾರ್ಟಿನ್‌ ಡೊಮಿನಿಕ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಾಂಬ್‌ ಸ್ಫೋಟದ ಸ್ಕೆಚ್‌ಗೆ ದುಬಾೖಯಲ್ಲಿ ರೂಪು ನೀಡಲಾಗಿತ್ತೆಂದು ಹೇಳಿದ್ದಾನೆ. ಈತ ಕಳೆದ 15 ವರ್ಷಗಳಿಂದ ದುಬಾೖಯಲ್ಲಿ ಎಲೆಕ್ಟ್ರೀಶಿಯನ್‌ ಆಗಿ ದುಡಿಯುತ್ತಿದ್ದ. 2 ತಿಂಗಳ ಹಿಂದೆ ವಾಪಸಾಗಿದ್ದ.

ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸುವಾಗ ಆತನಿಗೆ ದುಬಾೖಯಲ್ಲಿ ಯಾರಾದರೂ ನೆರವು ನೀಡಿದ್ದಾರೆಯೇ ? ನೀಡಿದ್ದರೆ ಯಾರು ? ಇತ್ಯಾದಿ ವಿಚಾರಗಳ ಬಗ್ಗೆ ಎನ್‌ಐಎ ಸಮಗ್ರ ತನಿಖೆ ನಡೆಸುತ್ತಿದೆ. ಬಾಂಬ್‌ ಸ್ಫೋಟದ ಹಿಂದಿನ ದಿನ ರಾತ್ರಿ ಮಾರ್ಟಿನ್‌ಗೆ ಫೋನ್‌ ಕರೆ ಬಂದಿತ್ತೆಂದೂ ಅದು ಯಾರು ಎಂದು ಪ್ರಶ್ನಿಸಿದಾಗ ಮಾರ್ಟನ್‌ ಡೊಮಿನಿಕ್‌ ಸಿಡಿಮಿಡಿಗೊಂಡಿದ್ದನೆಂದು ಆತನ ಪತ್ನಿ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಈ ಫೋನ್‌ ಕರೆಯನ್ನು ಕೇಂದ್ರೀಕರಿಸಿ ತನಿಖಾ ತಂಡ ತನಿಖೆಯನ್ನು ನಡೆಸುತ್ತಿದೆ.

ಬಂಧಿತ ಆರೋಪಿ ಮಾರ್ಟಿನ್‌ ಡೊಮಿನಿಕ್‌ನನ್ನು ವಿವಿಧೆಡೆಗಳಿಗೆ ಸಾಗಿಸಿ ಅಗತ್ಯದ ಮಾಹಿತಿಯನ್ನು ತನಿಖಾ ತಂಡ ಸಂಗ್ರಹಿಸಿದೆ. ಆ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರ್ನಾಕುಳಂ ಜಿಲ್ಲೆಯ ಕಾರಾಗೃಹದಲ್ಲಿರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next