Advertisement

Bihar ಸೇತುವೆಗಳ ಕುಸಿತದಲ್ಲಿ ಸಂಚು: ಕೇಂದ್ರ ಸಚಿವ ಮಾಂಜಿ

01:39 AM Jun 30, 2024 | Team Udayavani |

ಪಟ್ನಾ: ಕಳಪೆ ಕಾಮಗಾರಿಗಳಿಂದಾಗಿ ಬಿಹಾರದಲ್ಲಿ ಸತತ ಸೇತುವೆಗಳು ಕುಸಿತವಾಗುತ್ತಿದ್ದರೆ ಕೇಂದ್ರ ಸಚಿವ ಜಿತನ್‌ ರಾಮ್‌ ಮಾಂಜಿ ಅವರಿಗೆ ಮಾತ್ರ ಇದರಲ್ಲಿ “ಸಂಚು’ ಕಂಡಿದೆ! ಪರಿಣಾಮ ಅವರು, “”ಚುನಾವಣೆ ಮುಗಿದ ಬಳಿಕವೇ ಏಕೆ ಸೇತುವೆಗಳು ಕುಸಿಯುತ್ತಿವೆ?” ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಂಜಿ, “”15 ಅಥವಾ 30 ದಿನಗಳ ಮುಂಚೆ ಏಕೆ ಸೇತುವೆಗಳು ಕುಸಿಯ ಲಿಲ್ಲ? ಲೋಕಸಭಾ ಚುನಾವಣೆ ಬಳಿಕವೇ ಏಕೆ ಕುಸಿಯಲಾರಂಭಿಸಿವೆ? ಸರಕಾರಕ್ಕೆ ಕಳಂಕ ತರಲು ಸಂಚು ರೂಪಿಸಲಾಗಿದೆಯೇ?” ಎಂದು ಪ್ರಶ್ನಿಸಿ ದ್ದಾರೆ. ಕಳೆದ 9 ದಿನಗಳಲ್ಲಿ ಅರಾರಿಯಾ, ಸಿವಾನ್‌, ಪೂರ್ವ ಚಂಪಾರಣ್‌, ಕೃಷ್ಣಗಂಜ್‌, ಮಧುಬನಿ ಜಿಲ್ಲೆಗಳಲ್ಲಿ ಒಟ್ಟು 5 ಸೇತುವೆ ಕುಸಿದಿವೆೆ. ಬಿಹಾರ ಸರಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next