Advertisement

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

03:23 PM May 12, 2024 | Team Udayavani |

ಗಂಗಾವತಿ: ಶ್ರೀಲಂಕಾದಲ್ಲಿದ್ದ ಮಾತೆ ಸೀತಾದೇವಿಯ ಮಂದಿರ  ಜೀರ್ಣೋದ್ಧಾರವನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನೆರವೇರಿಸಿದ್ದು, ಶೀಘ್ರದಲ್ಲೇ ಸೀತಾದೇವಿ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.

Advertisement

ಇದರ ನಿಮಿತ್ತ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದ ಮಣ್ಣು, ಅಂಜನಾದ್ರಿ ದೇವಾಲಯದ ವತಿಯಿಂದ ಸೀತಾದೇವಿಗೆ ಸೀರೆ, ಹನುಮಂತನ ಮೂರ್ತಿ ಮತ್ತು ತುಂಗಭದ್ರ ನದಿಯಿಂದ ಜಲವನ್ನು ಶ್ರೀಲಂಕಾ ಸೀತಾದೇವಿ ದೇವಾಲಯ ಉದ್ಘಾಟನೆ ಸಂದರ್ಭದಲ್ಲಿ ಸಲ್ಲಿಸಲು ಆರ್ಟ್ ಆಫ್ ಲಿವಿಂಗ್ ನ ಟ್ರಸ್ಟಿ ಕೆಲೋಜಿ ಸಂತೋಷ್ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂತೋಷ್ ಶ್ರೀನಿವಾಸಲು ದಂಪತಿಗಳಿಗೆ ಸಮರ್ಪಿಸಿದರು.

ಇದೇ ತಿಂಗಳು ದೇವಾಲಯ ಶ್ರೀಲಂಕಾದಲ್ಲಿ ಪುನರ್ ಲೋಕಾರ್ಪಣೆಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ನ ಡಾ. ರವಿಶಂಕರ್ ಗುರೂಜಿ ಸೇರಿದಂತೆ ದೇಶವಿದೇಶದ ಮುಖಂಡರು, ಹಿಂದೂ ಧರ್ಮದ ಧರ್ಮ ಗುರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೆಲೋಜಿ ಸಂತೋಷ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next