Advertisement

Ram Mandir; ಪ್ರಜ್ಞಾವಂತ ಮುಸ್ಲಿಮರು ಸ್ವಾಗತಿಸಿದ್ದು ಸಂತೋಷ: ರಂಭಾಪುರಿ ಶ್ರೀ

05:12 PM Jan 21, 2024 | Team Udayavani |

ರಾಯಚೂರು: ”ಪ್ರಜ್ಞಾವಂತ ಮುಸ್ಲಿಮರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಸ್ವಾಗತ ಮಾಡಿದ್ದು ಸಂತೋಷ, ರಾಮನ ವಿಷಯದಲ್ಲಿ ಮುಂದೆಯೂ ಯಾರು ಸಂಘರ್ಷಕ್ಕೆ ಮುಂದಾಗಬಾರದು” ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Advertisement

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಹಿಂದೂ ಮುಸ್ಲಿಮರು ತೀರ್ಪಿಗೆ ಬದ್ದರಾಗಿ ನಡೆದುಕೊಳ್ಳುತ್ತಿದ್ದಾರೆ.ಮಂದಿರ ಪುನರ್ ನಿರ್ಮಾಣಕ್ಕೆ ಸುಮಾರು 500 ವರ್ಷಗಳಿಂದ ಹಿಂದೂಗಳು ಹೋರಾಟ ಮಾಡಿದ್ದರು.ಮಂದಿರ ಉದ್ಘಾಟನೆಯನ್ನು ದೇಶವಾಸಿಗಳು ಸಂತೋಷದಿಂದ ಸ್ವಾಗತ ಮಾಡಿದ್ದಾರೆ ಎಂದರು.

ರಾಮಮಂದಿರ ಉದ್ಘಾಟನೆಗೆ ಎಲ್ಲ ಹಿಂದೂ ಮಠಾಧೀಶರಿಗೆ ಆಹ್ವಾನ ಬಂದಿದ್ದು, ಪೂರ್ವನಿಗದಿಯಾದ ಕಾರ್ಯಕ್ರಮಗಳಿಂದಾಗಿ ಭಾಗವಹಿಸಲು ನಮಗೆ ಸಾಧ್ಯವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next