Advertisement

ಅತಿವೃಷ್ಟಿ ಸಂತ್ರಸ್ತರಿಗಿಂತ ಮೋದಿ ಕಾರ್ಯಕ್ರಮವೇ ಮುಖ್ಯವಾಗಿದೆ: ಕಾಂಗ್ರೆಸ್‌ ವಾಗ್ಧಾಳಿ

08:33 PM Sep 01, 2022 | Team Udayavani |

ಬೆಂಗಳೂರು: ಸರ್ಕಾರಕ್ಕೆ ಬೆಂಗಳೂರಿನ ಅತಿವೃಷ್ಟಿ ಸಂತ್ರಸ್ತರಿಗಿಂತ ಮಂಗಳೂರಿನ ಮೋದಿ ಕಾರ್ಯಕ್ರಮವೇ ಮುಖ್ಯವಾಗಿದೆ ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ವಾಗ್ಧಾಳಿ ನಡೆಸಿದೆ.

Advertisement

ಹಿಂದೆ ಮೋದಿ ಭೇಟಿಗಾಗಿ ರಸ್ತೆಗೆ ತೇಪೆ ಹಚ್ಚಲು 24 ಕೋಟಿ ರೂ. ಖರ್ಚು ಮಾಡಿದ ಸರ್ಕಾರ ಅತಿವೃಷ್ಟಿಯ ಪರಿಹಾರ ಕ್ರಮಗಳಿಗೆ ಮಾತ್ರ ಹಣ ನೀಡಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನಿಮಗೆ ಬೆಂಗಳೂರಿನ ಮೇಲೆ ಆಗಿದ್ದ ಕಾಳಜಿ ಈಗೇಕೆ ಇಲ್ಲ ಎಂದು ಕುಟುಕಿದೆ.

ಬಿಬಿಎಂಪಿಯಲ್ಲಿ ಕಮಿಷನ್‌ ರೇಟ್‌ ಶೇ. 40ರಿಂದ 50ಕ್ಕೆ ಏರಿಕೆ ಆಗಿದೆ. ಜನರ ಬದುಕು ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ಗುಂಡಿಗಳಿದ್ದವು, ಈಗ ರಸ್ತೆಯೇ ನೀರಿನ ಗುಂಡಿಯಾಗಿದೆ. ಬಿಜೆಪಿಯ ಭ್ರಷ್ಟಾಚಾರದ ಜಾತ್ರೆಯಲ್ಲಿ ಜನಸಾಮಾನ್ಯರ ಶವಯಾತ್ರೆಗೂ ಸಂಕಷ್ಟವಾಗಿದೆ.”ಬೊಮ್ಮಾಯಿ ಮಾಡೆಲ್‌’ ಇದೇನಾ ? ಬಿಜೆಪಿ ಫಾರ್‌ ಕರ್ನಾಟಕ ಎಂದು ಪ್ರಶ್ನಿಸಿದೆ.

ಬೆಂಗಳೂರು ನಗರ ಐಟಿ ಕ್ಯಾಪಿಟಲ್‌, ಸ್ಟಾರ್ಟ್‌ ಅಪ್‌ ಕ್ಯಾಪಿಟಲ್‌ ಎಂದು ಹೆಸರಾಗಿತ್ತು. ಇಂದು ಅತಿ ಹೆಚ್ಚು ರಸ್ತೆ ಗುಂಡಿಗಳ ನಗರ, ಮುಳುಗುತ್ತಿರುವ ನಗರ, ಡ್ರಗ್ಸ್‌ ಕ್ಯಾಪಿಟಲ್‌ ಆಗುತ್ತಿದೆ. 5 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದ್ದ ಬೆಂಗಳೂರು ಇಂದು ಕುಖ್ಯಾತಿ ಪಡೆಯುತ್ತಿರುವುದೇಕೆ ಎಂದು ಕಾಂಗ್ರೆಸ್‌ ಟೀಕಾಸ್ತ್ರ ಪ್ರಯೋಗ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next