Advertisement

ಕಾಂಗ್ರೆಸ್ ವಿರೋಧ ಪಕ್ಷ, ಅದಕ್ಕೆ ಎಲ್ಲದಕ್ಕೂ ವಿರೋಧ ಮಾಡುತ್ತಾರೆ: ಸಿಎಂ ಬೊಮ್ಮಾಯಿ

11:41 AM Dec 11, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಒಂದು ವಿರೋಧ ಪಕ್ಷ. ಹಾಗಾಗಿ ಎಲ್ಲದಕ್ಕೂ ವಿರೋಧ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತಾಂತರ ನಿಷೇಧ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ತಿರುಗೇಟು ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ದುಬಾರಿ ಹಣವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಎಲ್ಲೆಡೆ ಕಾಂಚಾಣದ್ದೇ ಸದ್ದು; ಕಾಣಿಸದ ಅಬ್ಬರ

“ತಂತ್ರಜ್ಞಾನ ಆಧಾರಿತ ಟೆಸ್ಟ್ ಮಾಡುತ್ತಾರೆ. ಹಾಗಾಗಿ ದರ ಸ್ವಲ್ಪ ಹೆಚ್ಚಿದೆ. ಕಿಟ್ ಟೆಸ್ಟ್ ಗೆ ವಿಶೇಷ ಸಲಕರಣೆಗಳ ಬಳಕೆ ಮಾಡ್ತಾರೆ. ನಮ್ಮಲ್ಲೇ ದರ ಕಡಿಮೆಯಿದೆ. ತಮಿಳುನಾಡಿನಲ್ಲಿ ನಮಗಿಂತಲೂ ಜಾಸ್ತಿಯಿದೆ” ಎಂದರು.

ಉತ್ತರ ಪ್ರದೇಶ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯುಪಿಗೆ ಮೂರು ದಿನ ಹೋಗುತ್ತಿಲ್ಲ. ಒಂದೇ ದಿನ ಹೋಗುತ್ತಿರುವುದು. ಅಲ್ಲಿ ಬಿಜೆಪಿಯ ಮುಖ್ಯಮಂತ್ರಿ ಗಳ ಕಾನ್ಪೆರೆನ್ಸ್ ಇದೆ. ಅದರಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next