Advertisement

ಲಿಂಗಾಯತ ಪ್ರತ್ಯೇಕ ಧರ್ಮ; ಮನವಿ ಬಾರದೆ ಶಿಫಾರಸ್ಸೇನು ಮಾಡೋದು;ಸಿಎಂ

11:13 AM Jul 26, 2017 | Sharanya Alva |

ಬೆಂಗಳೂರು: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ನಮಗೆ ಮನವಿಯೇ ಬಂದಿಲ್ಲ. ಮನವಿ ಬಾರದೇ ನಾವೆಲ್ಲಿ ಶಿಫಾರಸ್ಸು ಮಾಡೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ಹೇಳಿ ಯಾರೂ ಮನವಿ ಕೊಟ್ಟಿಲ್ಲ. ಮೊದಲು ಅವರು ಸ್ವತಂತ್ರ ಧರ್ಮದ ಬಗ್ಗೆ ಮನವಿ ಕೊಡಲಿ. ಅದರ ಬಗ್ಗೆ ನಂತರ ನೋಡೋಣ. ಆದರೆ ಮನವಿಯೇ ಬಂದಿಲ್ಲ, ಹಾಗಾಗಿ ಶಿಫಾರಸು ಮಾಡೋದು ಎಲ್ಲಿಂದ ಎಂದು ಪ್ರಶ್ನಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬ ಕೂಗು ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗೋದು ಬೇಡ ಎಂದು ಪೇಜಾವರಶ್ರೀ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ್, ಸಚಿವ ವಿನಯ್ ಕುಲಕರ್ಣಿ ಆಗ್ರಹಿಸಿಸುವ ಮೂಲಕ ವಿವಾದಕ್ಕೀಡಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next