Advertisement

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ : ಇದು ಕರ್ನಾಟಕದ ಜನರ ಧ್ವನಿ

10:52 AM Apr 27, 2018 | Team Udayavani |

ಮಂಗಳೂರು: ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದು ಕರ್ನಾಟಕದ ಜನರ ಧ್ವನಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. 

Advertisement

ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಹುಲ್‌ ಗಾಂಧಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ವೇಣುಗೋಪಾಲ್‌, ಡಾ.ಜಿ.ಪರಮೇಶ್ವರ್‌, ಬಿ.ಕೆ.ಹರಿಪ್ರಸಾದ್‌,ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ  ಅವರು ವೇದಿಯಲ್ಲಿ ಉಪಸ್ಥಿತರಿದ್ದರು. 

ಕರ್ನಾಟಕ ಜನರ ಮನ್‌ ಕೀ ಬಾತ್‌!

‘ನಾವು  ಮೂರು ನಾಲ್ಕು ಜನರು ಕುಳಿತು ಪ್ರಣಾಳಿಕೆಯನ್ನು ಸಿದ್ದಪಡಿಸಿಲ್ಲ. ಕರ್ನಾಟಕದ  ಪ್ರತಿ ಜಾತಿ, ಧರ್ಮದ ಎಲ್ಲಾ ಜನರು ಸೇರಿ ಮಾಡಿರುವ ಪ್ರಣಾಳಿಕೆ. ಇದು  ಪ್ರಧಾನಿ ಅವರ ಮನ್‌ ಕೀ ಬಾತ್‌ . ಅಲ್ಲ ಇದು ಕರ್ನಾಟಕ ಜನರ ಮನ್‌ ಕೀ ಬಾತ್‌ ‘ ಎಂದು ರಾಹುಲ್‌ ಹೇಳಿದರು. 

‘ಕಳೆದ ಪ್ರಣಾಳಿಕೆಯಲ್ಲಿ ಹೇಳಿದ 95 % ಅಂಶಗಳನ್ನು ಜಾರಿಗೊಳಿಸುತ್ತೇವೆ. ನಾವು ಬಸವಣ್ಣನ ತತ್ವಗಳನ್ನು ನಂಬಿದವರು . ಅವರು ”ನುಡಿದಂತೆ ನಡೆ”(ಕನ್ನಡದಲ್ಲೆ ಹೇಳಿದರು) ಎಂದಿದ್ದರು. ಹಾಗೇಯೇ ನಾವು ಕೆಲಸ ಮಾಡಿದ್ದೇವೆ’ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next