Advertisement

ಸೇನೆ, ಬಾಲಾಕೋಟ್‌ ಹೇಳಿಕೆ: ತ್ರಿಪುರ BJP ಅಭ್ಯರ್ಥಿ ವಿರುದ್ಧ ಚು. ಆಯೋಗಕ್ಕೆ ದೂರು

08:41 AM Apr 06, 2019 | Sathish malya |

ಅಗರ್ತಲಾ : ಪಶ್ಚಿಮ ತ್ರಿಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಿಮಾ ಭೌಮಿಕ್‌ ಅವರು ಭಾರತೀಯ ಸೇನೆ ಮತ್ತು ಬಾಲಾಕೋಟ್‌ ವಾಯು ದಾಳಿ ಬಗ್ಗೆ ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Advertisement

ಭೌಮಿಕ್‌ ಅವರು ತ್ರಿಪುರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ತ್ರಿಪುರ ಪ್ರದೇಶ ಕಾಂಗ್ರೆಸ್‌ ಸಮಿತಿಯ ಉಪಾಧ್ಯಕ್ಷ ತಪಸ್‌ ಡೇ ಅವರು ಮುಖ್ಯ ಚುನಾವಣಾಧಿಕಾರಿ (ಸಿಇಓ) ಶ್ರೀರಾಮ್‌ ತರಣಿಕಾಂತಿ ಅವರಿಗೆ ಪತ್ರ ಬರೆದು ಭೌಮಿಕ್‌ ಅವರಿಂದಾಗಿರುವ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next